ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಸೇವಾರೂಪದಲ್ಲಿ ರಂಗ ಪೂಜೆ ಹಾಗೂ ಶ್ರೀ ರಕ್ತೇಶ್ವರಿ ದೈವದ ನೇಮೋತ್ಸವ

0

ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಕು.ಭಾಗಿರಥಿ ಮುರುಳ್ಯರವರ ಸೇವಾ ರೂಪದಲ್ಲಿ ಶ್ರೀದೇವರಿಗೆ ದೊಡ್ಡ ರಂಗಪೂಜೆ , ಮತ್ತು ಶ್ರೀರಕ್ತೇಶ್ವರಿ ದೈವಕ್ಕೆ ಗಗ್ಗರ ಸೇವೆ ಜ.10ರಂದು ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಸದಸ್ಯರು, ಸುಳ್ಯ ತಹಶೀಲ್ದಾರ್ ಮಂಜುನಾಥ ಜಿ., ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ,ಎಸ್.ಎನ್. ಮನ್ಮಥ , ಕೃಷ್ಣ ಶೆಟ್ಟಿ ಕಡಬ, ಪುಲಸ್ಯ ರೈ ಕಡಬ , ರಾಕೇಶ್ ರೈ ಕೆಡೆಂಜಿ ,ಪುಷ್ಪಾವತಿ ಕಾಳುವಾಜೆ , ಶಿವಪ್ರಸಾದ್ ಮೈಲೇರಿ, ಸಂತೋಷ್ ಜಾಕೆ , ಗಣೇಶ್ ಉದನಡ್ಕ, ಹರೀಶ್ ಉಬರಡ್ಕ, ದಿಲೀಪ್ ಬಾಬ್ಲುಬೆಟ್ಟು, ಸುಳ್ಯ ಸಿ.ಎ ಬ್ಯಾಂಕಿನ ಅಧ್ಯಕ್ಷ ವಿಕ್ರಂ ಅಡ್ವಂಗಾಯ , ನಿರ್ದೇಶಕ ಹೇಮಂತ್ ಕಂದಡ್ಕ, ದರ್ಣಪ್ಪ ಗೌಡ ಅಂಬುಲ, ಎಡಮಂಗಲ ಸೊಸೈಟಿ ಅಧ್ಯಕ್ಷ ರಾಮಕೃಷ್ಣ ರೈ ಮಾಲೆಂಗಿರಿ , ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಬಾಮೂಲೆ, ಶಿವಾನಂದ ಬೊಳ್ಕಜೆ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಶ್ರೀಮತಿ ಗುಣವತಿ ನಾವೂರು , ಶಾಸಕರ ಕುಟುಂಬಸ್ಥರು, ಸಮಿತಿಗಳ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.