ವಿವಿಧ ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ ಸುಳ್ಯ ತಾಲೂಕಿಗೆ 33 ಲಕ್ಷ ವಕ್ಫ್ ಅನುದಾನ ಮಂಜೂರು.

0

ಕರ್ನಾಟಕ ರಾಜ್ಯ ವಕ್ಫ್ ಆಸ್ತಿಗಳ ಸಂರಕ್ಷಣೆ ಯೋಜನೆ ಅಡಿಯಲ್ಲಿ ಸುಳ್ಯ ತಾಲೂಕು ಮುಹಿದ್ಧೀನ್ ಜುಮಾ ಮಸ್ಜಿದ್ ಗಾಂಧಿನಗರ ಸುಳ್ಯ ಇದರ ಆವರಣಗೋಡೆ ನಿರ್ಮಾಣಕ್ಕಾಗಿ ರೂ.10 ಲಕ್ಷ , ಬದ್ರಿಯ ಜುಮಾ ಮಸೀದಿ ಪೈಚಾರ್ ಇದರ ತಡೆಗೋಡೆ ನಿರ್ಮಾಣಕ್ಕೆ ರೂ 5 ಲಕ್ಷ, ಆಲೆಟ್ಟಿ ಗ್ರಾಮದ ಕುಂಭಕೋಡು ಜುಮಾ ಮಸೀದಿಯ ಜೀರ್ಣೋದ್ಧಾರಕ್ಕಾಗಿ ರೂ 5 ಲಕ್ಷ, ಅಜ್ಜಾವರ ಮುಹಿದ್ಧೀನ್ ಜುಮಾ ಮಸೀದಿಯ ನವೀಕರಣ ಕಾಮಗಾರಿಗೆ ರೂ 5 ಲಕ್ಷ, ಆಲೆಟ್ಟಿ ಗ್ರಾಮ ಅರಂಬೂರು ಬದರ್ ಮಸೀದಿಯ ನವೀಕರಣಕ್ಕಾಗಿ ರೂ 5 ಲಕ್ಷ ಹಾಗೂ ಸಂಪಾಜೆ ಗಡಿಕಲ್ಲು ಬದ್ರ್ ಜುಮಾ ಮಸೀದಿ ಅಭಿವ್ರದ್ಧಿ ಕಾಮಗಾರಿಗೆ ರೂ.3 ಲಕ್ಷ ಒಟ್ಟು ತಾಲೂಕಿಗೆ 33 ಲಕ್ಷ ರೂಪಾಯಿ ವಕ್ಫ್ ಅನುದಾನ ಬಿಡುಗಡೆಗೊಂಡಿರುತ್ತದೆ. ಕರ್ನಾಟಕ ಸರಕಾರದ ವಕ್ಫ್ ಸಚಿವರಾದ ಜಮೀರ್ ಅಹಮ್ಮದ್ ಬಿಡುಗಡೆ ಮಾಡಿರುತ್ತಾರೆ ಎಂದು ಕೆ.ಪಿ.ಸಿ.ಸಿ ಯ ಮುಖ್ಯ ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.