p>

ಅರಂಬೂರು: ಕಾರಿನ ಹಿಂಬದಿಗೆ ಬೈಕ್ ಢಿಕ್ಕಿ

0

ಬಸ್ ನ ಅಡಿಗೆ ಸಿಲುಕಿದ ಬೈಕ್ ಸವಾರನ ತಲೆಗೆ ಗಂಭೀರ ಗಾಯ

ಕಾರಿನ ಹಿಂಬದಿಗೆ ಬೈಕ್ ಢಿಕ್ಕಿಯಾಗಿ, ಬೈಕ್ ಸವಾರ ರಸ್ತೆಗೆ ಬಿದ್ದ ಸಂದರ್ಭದಲ್ಲಿ ಮುಂಭಾಗದಿಂದ ಬಂದ ಬಸ್ ಬೈಕ್ ಸವಾರನನ್ನು ರಸ್ತೆಯಲ್ಲಿ ಎಳೆದೊಯ್ದು, ತಲೆಗೆ ಗಂಭೀರವಾಗಿ ಗಾಯಗೊಂಡು , ಆಸ್ಪತ್ರೆಗೆ ದಾಖಲಾದ ಘಟನೆ ಅರಂಬೂರಿನಲ್ಲಿ ಫೆ.27ರಂದು ಸಂಜೆ ಸಂಭವಿಸಿದೆ.

ಸುಳ್ಯದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರೊಂದು ಅರಂಬೂರಿನಲ್ಲಿ ತಕ್ಷಣ ಬ್ರೇಕ್ ಹಾಕಿ ಇಡ್ಯಡ್ಕ ಕಡೆಗೆ ಕಾರು ತಿರುಗಿಸಿದಾಗ, ಆ ಕಾರಿನ ಹಿಂಬದಿಯಿದ್ದ ಇನ್ನೊಂದು ಕಾರಿನ ಚಾಲಕ ಒಮ್ಮಿಂದೊಮ್ಮೆಲೆ ಬ್ರೇಕ್ ಹಾಕಿದರೆನ್ನಲಾಗಿದೆ. ಕಾರಿನ ಹಿಂದೆ ತೆರಳುತ್ತಿದ್ದ ಸುಳ್ಯದ ಗಾಂಧಿನಗರದಲ್ಲಿ ಉದ್ಯೋಗಿಯಾಗಿರುವ ಪರಮೇಶ್ವರ ಪೆರುಂಗೋಡಿ ಎಂಬವರು ಕಾರಿನ ಹಿಂಬದಿಗೆ ಢಿಕ್ಕಿಹೊಡೆದು ರಸ್ತೆಗೆ ರಸ್ತೆಗೆ ಬಿದ್ದರೆನ್ನಲಾಗಿದೆ.

ಈ ಸಂದರ್ಭದಲ್ಲಿ ಮುಂಭಾಗದಲ್ಲಿ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಪರಮೇಶ್ವರ ಅವರನ್ನು ಒಂದಷ್ಟು ದೂರ ಎಳೆದೊಯ್ದಿತೆಂದು ತಿಳಿದುಬಂದಿದೆ.
ಪರಿಣಾಮವಾಗಿ ಪರಮೇಶ್ವರ ಅವರ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಅವರನ್ನು ಸ್ಥಳೀಯರು ಸೇರಿ ಶಿವ ಆಂಬುಲೆನ್ಸ್ ನಲ್ಲಿ ಬೈಕ್ ಸವಾರರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ಕೊಡಿಸಿ, ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.