ಪೈಂಬೆಚ್ಚಾಲು ಎಸ್ ಎಸ್ ಎಫ್ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ಪೈಂಬೆಚ್ಚಾಲು ಎಸ್ ಎಸ್ಎಫ್ ಯೂನಿಟ್ ಇದರ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ ಏಪ್ರಿಲ್ 26ರಂದು ನಡೆಯಿತು.
ಸಭಾಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ನೌಶಾದ್ ಫಾಲಿಲಿ ವಹಿಸಿದ್ದರು. ಕಳೆದ ಸಾಲಿನ ವರದಿ ಹಾಗೂ ಲೆಕ್ಕಪತ್ರವನ್ನು ಕಾರ್ಯದರ್ಶಿ ಅನಸ್ ಬಿ ಎ ಮಂಡಿಸಿದರು. ವೇದಿಕೆಯಲ್ಲಿ ಸೆಕ್ಟರ್ ಪ್ರತಿನಿಧಿಯಾಗಿ ಫಾಯಿಜ್ ಕುಂಭಕೋಡು, ಮುನೀರ್ ಸಕಾಫಿ, ಸುನ್ನಿ ಯುವಜನ ಸಂಘದ ಮುಖಂಡರಾದ ಹಸೈನಾರ್ ಕೆ ಎಂ, ಆಸಿಫ್ ಕೆ ಎಂ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಚರ್ಚೆಗಳು ನಡೆದು ನೂತನ ಸಾಲಿನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ನಾಸಿರ್ ಪಿ ಎ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಕುಂಞಿ, ದಹ್ವಾ ಕಾರ್ಯದರ್ಶಿ ಮುನೀರ್ ಸಖಾಫಿ,ವಖ್ಫ್ ಕಾರ್ಯದರ್ಶಿ ಅನಸ್ ಪಿ ಎಚ್, ಚಾರಿಟಿ ಕಾರ್ಯದರ್ಶಿ ಸಮದ್ ಪಿ ಬಿ, ಇತರ ವಿಭಾಗಗಳ ಕಾರ್ಯದರ್ಶಿಗಳಾಗಿ ಸಾಬಿತ್ ಟಿ ಎ, ರಾಫಿ ಕೆ ಎಂ, ಹಾಶಿರ್ ಪಿಎಚ್, ನೌಶಾದ್ ಫಾಲಿಲಿ, ಸ್ವಾಧಿಕ್ ಫಾಲಿಲಿ, ಸದಸ್ಯರುಗಳಾಗಿ ಆಬಿದ್ ಶಖಾಫಿ,ನೌಶಾದ್ ಹಿಮಮಿ, ಫಾರೂಕ್ ಸಿ ಎಚ್, ಫಾಝಿಲ್ ಟಿ ಕೆ, ಸುಹೈಬ್, ಹಾಫಿಝ್ ಯೂನುಸ್, ಶಿಹಾಬ್ ಫಾಲಿಲಿ, ಹಾಸಿಂ ಸಿ ಕೆ, ಇರ್ಷಾದ್ ಇವರನ್ನು ಆಯ್ಕೆ ಮಾಡಲಾಯಿತು.
ಸ್ವಾಧಿಕ್ ಫಾಲಿಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.