ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಸಂಕ್ರಮಣ ಪೂಜೆ

0

ಅಡ್ಪಂಗಾಯ ಅಯ್ಯಪ್ಪ ಮಂದಿರದಲ್ಲಿ ಮಿಥುನ ಸಂಕ್ರಮಣ ಪ್ರಯುಕ್ತ ಪೂಜಾ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮದರ್ಶಿ ಹಾಗೂ ಗುರುಸ್ವಾಮಿಗಳಾಗಿರುವ ಶಿವಪ್ರಕಾಶ ಅಡ್ಪಂಗಾಯ ನೇತೃತ್ವದಲ್ಲಿ ಜೂ. 17ರಂದು ನಡೆಯಿತು. ಬೆಳಿಗ್ಗೆ ಪುರೋಹಿತರಿಂದ ಗಣಪತಿ ಹವನ ಹಾಗೂ ವೈದಿಕ ಕಾರ್ಯಕ್ರಮ ನಡೆಯಿತು. ಸಂಜೆ ಶ್ರೀ ದುರ್ಗಾ ಪೂಜೆಯು ನಡೆದು ಬಳಿಕ ಗುರುಸ್ವಾಮಿಯವರಿಂದ ಅಯ್ಯಪ್ಪ ಸ್ವಾಮಿಯ ಸೇವೆಯೊಂದಿಗೆ ಮಹಾಮಂಗಳಾರತಿ ನಡೆಯಿತು.

ಈ ಸಂದರ್ಭದಲ್ಲಿ ಗುರುಸ್ವಾಮಿಯವರಿಂದ ಕ್ಷೇತ್ರದ ಸಾಧಕರಾದ ಶ್ರೀ ಚಂದ್ರ ಪಾಟಾಳಿ (ಉಬರಡ್ಕ) ಕೇಪು ವಿಟ್ಲ ಇವರನ್ನು ಸನ್ಮಾನಿಸಲಾಯಿತು .ರಾತ್ರಿ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನಡೆಯಿತು.