ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆ

0

ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಮಾಸಿಕ ಸಭೆಯು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ ಯವರ ಅಧ್ಯಕ್ಷತೆಯಲ್ಲಿ ಜೂ.30 ರಂದು ನಡೆಯಿತು.

ಈ ಸಂದರ್ಭದಲ್ಲಿ 25 ನೇ ವರ್ಷದ ಮಹಾಸಭೆ ಹಾಗೂ ಬೆಳ್ಳಿ ಹಬ್ಬ ಕಾರ್ಯಕ್ರಮದ ಅಯ- ವ್ಯಯದ ಕುರಿತು ಖಜಾಂಜಿ ಗೋಪಾಲ ಎಸ್.ನಡುಬೈಲು ಲೆಕ್ಕ ಪತ್ರ ಮಂಡಿಸಿದರು.
ಸಭೆಯಲ್ಲಿ ಲೆಕ್ಕ ಪತ್ರ ಅಂಗೀಕಾರ ಮಾಡಲಾಯಿತು.


ಸಂಘದ ಕಾರ್ಯದರ್ಶಿ ಜನಾರ್ದನ ದೋಳ, ಸ್ವರ್ಣಶ್ರೀ ಸಹಕಾರಿ ಸಂಘದ ಸಿ.ಇ.ಒ ಅಶ್ವಥ್ ಬಿಳಿಮಲೆ , ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬೆಳ್ಳಿ ಹಬ್ಬ‌ ಕಾರ್ಯಕ್ರಮದ ಯಶಸ್ವಿ ಗೆ ಸಹಕರಿಸಿದ ಸದಸ್ಯರಿಗೆ ಅಧ್ಯಕ್ಷರು ಕೃತಜ್ಞತೆ ಸಲ್ಲಿಸಿದರು.


ಬಳಿಕ ಮುಂದಿನ ಸಾಲಿನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಹಾಗೂ ಅಧಿಕಾರ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಶಾಂತಪ್ಪ ಡಿ,
ಉಪಾಧ್ಯಕ್ಷ ಧನಂಜಯ ಗುತ್ತಿಗಾರು, ಪ್ರ.ಕಾರ್ಯದರ್ಶಿ ಮಧುಚಂದ್ರ ಪಂಜ, ಕೋಶಾಧಿಕಾರಿ ದಿನೇಶ್ ಬಾಚೋಡಿ,ಜತೆಕಾರ್ಯದರ್ಶಿ ವಾಸುದೇವ, ಸದಸ್ಯರುಗಳಾದ ನಾಗೇಶ್ ಕೇರ್ಪಳ, ಬಾಲಕೃಷ್ಣ ಗೌಡ, ರಮೇಶ್ ಶೆಟ್ಟಿ, ಮನೋಹರ ಬೊಳ್ಳೂರು, ನಾರಾಯಣ ಆಚಾರಿ,ಕಮಲಾಕ್ಷ ಕಲ್ಲುಗುಂಡಿ, ರಘುರಾಮ ಜಟ್ಟಿಪಳ್ಳ, ಬಾಲಕೃಷ್ಣ ಗೌಡ ,ವಾಸುದೇವ ಜಾಲ್ಸೂರು, ಮೋನಪ್ಪ ಗುತ್ತಿಗಾರು,ವಸಂತ ಪರಿವಾರಕಾನ ಭಾಗವಹಿಸಿದರು.


ಗೋಪಾಲ ಎಸ್.ನಡುಬೈಲು ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ ದೋಳ ವಂದಿಸಿದರು. ಆಗಮಿಸಿದ ಎಲ್ಲರಿಗೂ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು.