ಆರಿಕೋಡಿ ಕ್ಷೇತ್ರದ ಅದೃಷ್ಟ ಚೀಟಿ ಫಲಿತಾಂಶ : ಸುಳ್ಯದ ಪತ್ರಿಕಾ ವಿತರಕ ಸತೀಶ್ ಭಟ್ ರಿಗೆ ಒಲಿದ ಬೈಕ್

0

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ವಾರ್ಷಿಕ ಉತ್ಸವದ ಅಂಗವಾಗಿ 7ನೇ ವರ್ಷದ ಅದೃಷ್ಟ ಚೀಟಿ ಯೋಜನೆಯಲ್ಲಿ ಸುಳ್ಯದ ಪತ್ರಿಕಾ ವಿತರಕ ಸತೀಶ್ ಭಟ್ ರವರಿಗೆ ಮೂರನೇ ಬಹುಮಾನ ಬೈಕ್ ಲಭಿಸಿದೆ.

ಫೆ.13 ರಂದು ತನ್ನ ಸ್ನೇಹಿತರೊಂದಿಗೆ ರಾತ್ರಿ ಆರಿಕೋಡಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಅವರು ಅಲ್ಲಿಯೇ ಅದೃಷ್ಟ ಚೀಟಿ ಪಡೆದುಕೊಂಡಿದ್ದರು.