ಡಾ. ಡಿ. ವಿ ಲೀಲಾಧರ್ ರವರಿಗೆ ಸನ್ಮಾನ

0

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ
ಚೇರ್ ಮ್ಯಾನ್ ಆಗಿ ನೇಮಕಗೊಂಡಿರುವ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ
ಡಾ. ಲೀಲಾದರ್ ಡಿ. ವಿ ಯವರನ್ನು
ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿಯಮಿತ ಬೆಂಗಳೂರು ಇದರ ರಾಜ್ಯ ನಿರ್ದೇಶಕ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿನಂದಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ರತ್ನ ಚಂದ್ರ ಕೋಲ್ಚಾರ್ ಅಭಿನಂದನಾ ಸಮಿತಿಯ ಕೋಶಾಧಿಕಾರಿ ಕೆ. ಟಿ ವಿಶ್ವನಾಥ, ಜೊತೆ ಕಾರ್ಯದರ್ಶಿಗಳಾದ ಸುಪ್ರೀತ್ ಮೋoಟಡ್ಕ, ಪ್ರೀತಮ್ ಕೇರ್ಪಳ, ಪಾತಿಕಲ್ಲು ಕಂಟ್ರಕ್ಷನ್ ಮಾಲಕ ಮಿಲನ್ ಪಾತಿಕಲ್ಲು ಉಪಸ್ಥಿತರಿದ್ದರು.