ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ಶ್ರೀ ಗಣೇಶನ ವೈಭವದ ಶೋಭಾಯಾತ್ರೆ
ನಾಸಿಕ್ ಬ್ಯಾಂಡ್ ,ಬ್ಯಾಂಡ್, ವಾದ್ಯದ ಅಬ್ಬರ,ವಿವಿಧ ವೇಷಭೂಷಣಗಳ ಕುಣಿತ
ಗೊಂಬೆ ಕುಣಿತ,ಹುಲಿವೇಷ,ಸಿಂಗಾರಿ ಮೇಳದ ಮೆರುಗು

ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ,ವಿರಾಟ್ ಫ್ರೆಂಡ್ಸ್ ವತಿಯಿಂದ ಶ್ರೀ ಗಣೇಶೋತ್ಸವವು ಭಕ್ತಿ ,ಸಂಭ್ರಮದಿಂದ ಆ.27 ಮತ್ತು ಆ.28 ರಂದು ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಆ.28 ರಂದು ಸಂಜೆ ಶ್ರೀ ದೇವರ ವೈಭವದ ಶೋಭಾಯಾತ್ರೆ ನಡೆಯಿತು.
















ಶೋಭಾಯಾತ್ರೆಯಲ್ಲಿ ಶ್ರೀ ದುರ್ಗಾ ನಾಸಿಕ್ ಬೀಟ್ಸ್ ಬೆಳ್ಳಾರೆ,ಗೋಪಾಲಕೃಷ್ಷ ಗೊಂಬೆ ಬಳಗ ಎಡಮಂಗಲ,ಸಿಡಿಮದ್ದಿನ ಪ್ರದರ್ಶನ,ಬ್ಯಾಂಡ್ ವಾದ್ಯದ ಅಬ್ಬರ,ವಿವಿಧ ವೇಷಭೂಷಣಗಳ ಕುಣಿತದೊಂದಿಗೆ.ಕೈರಾಳಿ ಸಿಂಗಾರಿ ಮೇಳ ಬೊಳ್ಳೂರು,
ವಿರಾಟ್ ಟೈಗರ್ಸ್ ಬೆಳ್ಳಾರೆ ಇವರಿಂದ ಹುಲಿವೇಷದೊಂದಿಗೆ ವೈಭವದಿಂದ ಶ್ರೀ ಗಣೇಶನ ಶೋಭಾಯಾತ್ರೆ ಬೆಳ್ಳಾರೆ ಮುಖ್ಯ ರಸ್ತೆಯಲ್ಲಿ ನಡೆದು ಗೌರಿಹೊಳೆಯಲ್ಲಿ ಜಲಸ್ತಂಭನ ಮಾಡಲಾಯಿತು.

ಈ ಸಂದರ್ಭದಲ್ಲಿ
ಗೌರವಾಧ್ಯಕ್ಷ ಮಿಥುನ್ ಶೆಣೈ, ಅಧ್ಯಕ್ಷ ಸಂತೋಷ್ ಮಣಿಯಾಣಿ, ಕಾರ್ಯದರ್ಶಿ ಜೀವನ್ ಕಾವಿನಮೂಲೆ,ಕೋಶಾಧಿಕಾರಿ ಜೀವನ್ ಬೆಳ್ಳಾರೆ ಹಾಗೂ ಸರ್ವಸದಸ್ಯರು ಹಾಗೂ ನೂರಾರು ಜನ ಭಕ್ತಾದಿಗಳು ಉಪಸ್ಥಿತರಿದ್ದರು.











