ಪಂಜ: ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಒಳಾಂಗಣದ 4 ಸುತ್ತು ಮೇಲ್ಚಾವಣಿ ಮಾಡಲು ಮುಹೂರ್ತ

0

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಒಳಾಂಗಣದ 4 ಸುತ್ತು ಮೇಲ್ಚಾವಣಿ ಮಾಡಲು ಅ. 30ರಂದು ಶ್ರೀ ದೇವರಲ್ಲಿ ಪ್ರಾರ್ಥನೆ ಮಾಡಿ ದೇವರ ಅನುಗ್ರಹ ಪಡೆದು ಮುಹೂರ್ತ ಮಾಡಲಾಯಿತು.

ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಸಂತೋಷ್ ಕುಮಾರ್ ರೈ ಪಲ್ಲತ್ತಡ್ಕ, ಧರ್ಮಪಾಲ ಗೌಡ ಮರಕಡ, ಧರ್ಮಣ್ಣ ನಾಯ್ಕ್ಕ ಗರಡಿ, ಮಾಲಿನಿ ಕುಧ್ವ, ಪವಿತ್ರ ಮಲ್ಲೆಟಿ, ಗೌರವ ಸಲಹೆಗಾರರಾದ ಮಹೇಶ್ ಕುಮಾರ್ ಕರಿಕಳ, ಉಮೇಶ್ ಬುಡೆoಗಿ ಬಳ್ಪ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಶ್ವನಾಥ ಜಾಕೆ, ಗಂಗಾಧರ ಗುಂಡಡ್ಕ, ಶ್ರೀ ಪೈಂದೋಡಿ ಸುಬ್ರಾಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೇಶವ ಗೌಡ ಕುದ್ವ, ಕೃಷ್ಣ ವೈಲಾಯ, ಗಿರಿಧರ ಇಟ್ಯಡ್ಕ, ಶೀನಪ್ಪ ಬನ ಹಾಗೂ ಕಾಮಗಾರಿ ಮಾಡುವ ಪೆರ್ಲದ ಗಿರೀಶ್ ಮಂಟಪಾಡಿ ಹಾಗೂ ವಿನೀತ್ ಕಾನ ಉಪಸ್ಥಿತರಿದ್ದರು. ದೇಗುಲದ ಪ್ರಧಾನ ಅರ್ಚಕರಾದ ರಾಮಚಂದ್ರ ಭಟ್ ಪ್ರಾರ್ಥನೆ ಮಾಡಿ ಪ್ರಸಾದ ನೀಡಿದರು.