ಇಂದು ಲಕ್ಷ ದೀಪ, ಕುಣಿತ ಭಜನೆ
ಚಂಪಾಷಷ್ಠಿ ಮಹೋತ್ಸವ ಸಂಭ್ರಮದಲ್ಲಿರು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾತ್ರಿ ಚಂಪಾಷಷ್ಠಿ ಮಹೋತ್ಸವ ಅಂಗವಾಗಿ ಶ್ರೀ ದೇವರ ಉತ್ಸವ ಜರುಗುತಿದ್ದು.
ನ.17 ಮತ್ತು ನ.18 ರಂದು ರಾತ್ರಿ ಶ್ರೀ ದೇವರಿಗೆ ಮಹಾಪೂಜೆ ನಡೆದು ಶೇಷವಾಹನಯುಕ್ತ ಬಂಡಿ ಉತ್ಸವ ಜರುಗಿತು.















ಇಂದು ಲಕ್ಷ ದೀಪೋತ್ಸವ:
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಚಂಪಾಷಷ್ಠಿ ಜಾತ್ರೋತ್ಸವದ ನಿಮಿತ್ತ ನ.19ರಂದು ಲಕ್ಷದೀಪೋತ್ಸವ ನಡೆಯಲಿದೆ. ಈ ನಿಮಿತ್ತ ರಾತ್ರಿ ದೇವರ ಚಂದ್ರಮಂಡಲ ರಥೋತ್ಸವ ನಡೆಯಲಿದೆ. ರಥೋತ್ಸವದ ಸಂದರ್ಭ ಕ್ಷೇತ್ರಾದ್ಯಂತ ಲಕ್ಷ ದೀಪಗಳು ಬೆಳಗಲಿವೆ. ದೇವಾಲಯ ಸೇರಿದಂತೆ ಗೋಪುರದ ಬಳಿಯಿಂದ ಕಾಶಿಕಟ್ಟೆವರೆಗೆ ಹಾಗೂ ಆದಿ ಸುಬ್ರಹ್ಮಣ್ಯ ದೇವಳ ಮತ್ತು ದೇವಳದ ಪರಿಸರದಲ್ಲಿ ಲಕ್ಷ ದೀಪಗಳು ಪ್ರಜ್ವಲಿಸಲಿವೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಖ್ಯಾತ ಗಾಯಕ ರವೀಂದ್ರ ಪ್ರಭು
ತಂಡದಿಂದ ಸಂಜೆ ಗಂಟೆ 6 ಕ್ಕೆ ಭಜನೆ ನಡೆಯಲಿದ್ದು ಕುಣಿತ ಭಜನೆಯೂ ನಡೆಯಲಿದೆ.










