ಪೋಲಿಯೋ ನಿರ್ಮೂಲನೆಗೆ ಆದ್ಯತೆ: ಸುದ್ದಿಗೋಷ್ಠಿಯಲ್ಲಿ ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.

0

ಸುಳ್ಯ: ಜಗತ್ತಿನಿಂದ ಪೋಲಿಯೋ ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ. ಆದುದರಿಂದ ಪೋಲಿಯೋ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ತನಕ ಪ್ರಯತ್ನ ಮುಂದುವರಿಯಲಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ.ಹೇಳಿದ್ದಾರೆ. ಸುಳ್ಯ ರೋಟರಿ ಕ್ಲಬ್‌ಗೆ‌ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.21ರಂದು ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಲದೆ ಎಂದ ಅವರು ಭಾರತ 2013ರಲ್ಲಿ ಮುಕ್ತ ಆಗಿದೆ.ಆದರೆ ಜಗತ್ತಿನಲ್ಲಿ ಒಟ್ಟು 39 ಪೋಲಿಯೋ ಕೇಸುಗಳು ಇದೆ. ಪಾಕಿಸ್ತಾನದಲ್ಲಿ 30 ಹಾಗೂ ಅಪಘಾನಿಸ್ತಾನದಲ್ಲಿ 9 ಪೋಲಿಯೋ ಕೇಸುಗಳು ಇದೆ ಎಂದು ಅವರು ಹೇಳಿದರು. ಈ ಪೋಲಿಯೋ ಪಿಡುಗು ಮತ್ತೆ ಹರಡದಂತೆ ಲಸಿಕೆ ಹಾಕಿಸಿ ಎಚ್ಚರಿಕೆ ವಹಿಸುವ ಅಗತ್ಯ ಇದೆ ಎಂದು ಹೇಳಿದರು.
ಸಮಾಜದ ಅಭಿವೃದ್ಧಿಗೆ ರೋಟರಿ ಫೌಂಡೇಶನ್ ವತಿಯಿಂದ ಹಲವಾರು ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದಿದೆ. ಪ್ರತಿ ಕ್ಲಬ್ ಕೂಡ ಹಲವು ಸಾಮಾಜಿಕ ಸೇವೆಗಳನ್ನು ನಡೆಸುತಿದೆ. ರೋಟರಿ ಜಿಲ್ಲಾ ವ್ಯಾಪ್ತಿಯಲ್ಲಿ 4 ಕೋಟಿಯ ವಿವಿಧ ಯೋಜನೆಗಳನ್ನು ರೂಪಿಸಿದೆ ಎಂದರು. ರೋಟರಿ ಕ್ಲಬ್ ಸುಳ್ಯ ಸಿಟಿಗೆ ಸುಳ್ಯ ಸರಕಾರಿ ಆಸ್ಪತ್ರೆಯ ಕಣ್ಣಿನ ಚಿಕಿತ್ಸಾ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ವಿಭಾಗಕ್ಮೆ ಮೈಕ್ರೋ ಸ್ಕೋಪ್ ನೀಡುವ ಯೋಜನೆ ಇದೆ ಎಂದರು. ಸಮಾಜದ ಬೇಡಿಕೆಗೆ ಅನುಸಾರವಾಗಿ ವಿವಿಧ‌ ಮೂಲಭೂತ ಅವಶ್ಯಕತೆಗಳನ್ನು ಪೂರೈಸುತಿದೆ ಎಂದು ಹೇಳಿದರು. ಸುಳ್ಯ ರೋಟರಿ ಕ್ಲಬ್‌ಗೆ ಅಧಿಕೃತ ಭೇಟಿ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ‌ ಗವರ್ನರ್ ಮಿತ್ತಡ್ಕದ ರೋಟರಿ ಶಾಲಾ ಕ್ಯಾಂಪಸ್‌ನಲ್ಲಿ ನಿರ್ಮಿಸಿದ ಟ್ರಸ್ಟ್ ರೂಮ್, ಶೌಚಾಲಯಗಳ ಉದ್ಘಾಟನೆ ನೆರವೇರಿಸಿದರು.
ಸುದ್ದಿಗೋಷ್ಠಿಯಲ್ಲಿ ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್, ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಪ್ರಮೋದ್.ಕೆ, ಝೋನಲ್ ಲೆಪ್ಟಿನೆಂಟ್ ಪುರುಷೋತ್ತಮ ಕೆ.ಜಿ ಉಪಸ್ಥಿತರಿದ್ದರು.