ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆ ದಾರರ ಸಂಘ (ರಿ )ಬೆಂಗಳೂರು, ದ. ಕ. ಜಿಲ್ಲಾ ಸಮಿತಿ ಉಪಸಮಿತಿ ಸುಳ್ಯ ಇದರ ವತಿಯಿಂದ ಡಿ.9ರಂದು ಸುದರ್ಶನ ಹೋಮವು ಸುಳ್ಯವಿವೇಕಾನಂದ ಸರ್ಕಲ್ನಬಳಿಯಿರುವ ವಿದ್ಯುತ್ ಗುತ್ತಿಗೆದಾರರ ಸಮೃದ್ಧಿ ಸಂಕೀರ್ಣ ಕಟ್ಟಡದಲ್ಲಿ ನಡೆಯಿತು.








ತಂತ್ರಿಗಳಾದ ವೇದವ್ಯಾಸ ತಂತ್ರಿ ಯವರ ನೇತೃತ್ವ ದಲ್ಲಿ ಪೂಜಾ ಕಾರ್ಯ ನಡೆಯಿತು.

ಈ ಕಾರ್ಯಕರ್ಮದಲ್ಲಿ ಸಂಘದ ಎಲ್ಲಾ ಹಿರಿಯ, ಕಿರಿಯ ವಿದ್ಯುತ್ ಗುತ್ತಿಗೆದಾರರು ಉಪಸ್ಥಿತರಿದ್ದು ದೇವತಾ ಕಾರ್ಯದಲ್ಲಿ ಭಾಗವಹಿಸಿ ದೇವರ ಪ್ರಸಾದ ಹಾಗೂ ಅನ್ನ ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು



