ಕೇರಳಕ್ಕೆ ಮುಂಗಾರು ಪ್ರವೇಶ

0

ಶೀಘ್ರವೇ ಕರ್ನಾಟಕ, ತಮಿಳುನಾಡಿಗೂ ಪ್ರವೇಶ

ಸರಿ ಸುಮಾರು ಒಂದು ವಾರದ ವಿಳಂಬದ ಬಳಿಕ ಕೇರಳಕ್ಕೆ ಮುಂಗಾರು ಮಾರುತಗಳ ಪ್ರವೇಶವಾಗಿದೆ. ಕೆಲವೇ ಗಂಟೆಗಳಲ್ಲಿ ಕರ್ನಾಟಕ ಹಾಗೂ ತಮಿಳುನಾಡಿಗೂ ಈ ಮಾರುತಗಳು ಪ್ರವೇಶ ಪಡೆಯಲಿದೆ.

ಅಂದಾಜು ಒಂದು ವಾರ ತಡವಾಗಿ ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶ ಪಡೆದುಕೊಂಡಿದೆ. ಗುರುವಾರ ರಾಜ್ಯದ ಶೇ.95ರಷ್ಟು ಪ್ರದೇಶಗಳಲ್ಲಿ ಮಳೆಯಾಗಿದೆ.

ಇನ್ನು ಕೆಲವೇ ಗಂಟೆಗಳಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಮುಂಗಾರು ಆಗಮಿಸಲಿದೆ. ಗಾಳಿಯ ವೇಗ ಮತ್ತು ಪರಿಸ್ಥಿತಿಗಳು ಸರಿಯಾಗಿದ್ದರೆ ಅದು ದಕ್ಷಿಣದಿಂದ ಉತ್ತರಕ್ಕೆ ಅತ್ಯಂತ ವೇಗವಾಗಿ ಚಲಿಸುತ್ತದೆ ಎಂದು ಹವಾಮಾನ ಇಲಾಖೆಯ (ಐಎಂಡಿ) ಹಿರಿಯ ವಿಜ್ಞಾನಿ ಆರ್‌ಕೆ ಜೆನಮಣಿ ಹೇಳಿದ್ದಾರೆ. ಮುಂದಿನ ವಾರ ಮಾನ್ಸೂನ್‌ ಮಾರುತಗಳು ಉತ್ತರ ಭಾರತ ತಲುಪಲಿದೆ.

ಮಾನ್ಸೂನ್ ಸಾಮಾನ್ಯವಾಗಿ ಜೂನ್ 1 ರ ಹೊತ್ತಿಗೆ ದೇಶಕ್ಕೆ ಪ್ರವೇಶ ಪಡೆಯುತ್ತದೆ. ಆದರೆ, ಈ ಬಾರಿ ಜೂನ್‌ 4 ರಂದು ಮಾನ್ಸೂನ್‌ ಕೇರಳವನ್ನು ತಲುಪಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು.

ಆದರೆ, ಅರಬ್ಬಿ ಸಮುದ್ರದಲ್ಲಿ ಉಂಟಾರ ಬೀಪರ್‌ಜಾಯ್‌ ಚಂಡಮಾರುತವು ಮಾನ್ಸೂನ್‌ ಮಾರುತದ ಮಾರ್ಗವನ್ನು ನಿರ್ಬಂಧ ಮಾಡಿತ್ತು. ಆದರೆ, ಬೀಪರ್‌ಜಾಯ್‌ ಚಂಡಮಾರುತವೀಗ ಸಣ್ಣ ಪಥ ಬದಲಾವಣೆ ಮಾಡಿದ್ದು, ಈಗ ಮಾತಿಸ್ತಾನದತ್ತ ಸಾಗಿದೆ.

ಇದರಿಂದಾಗಿ ಕೇರಳದ ಕಡೆಗೆ ಮಾನ್ಸೂನ್‌ ಮಾರುತಗಳು ತಿರುಗಿವೆ. ಕೇರಳದ ಕೊಚ್ಚಿಯಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ತಾಪಮಾನದಲ್ಲೂ ದೊಡ್ಡ ಪ್ರಮಾಣದ ಇಳಿಕೆಯಾಗಿದೆ. ಇನ್ನು ಕೇರಳದ ತಿರುವನಂತಪುರದಲ್ಲೂ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ.