ಪುಳಿಕುಕ್ಕು : ಹೊಳೆಯಲ್ಲಿ ತೇಲಿ ಬಂದ ಕಾಡು ಕೋಣದ ಕಳೇಬರ

0

ಅರಣ್ಯ ಇಲಾಖೆಯಿಂದ ತೆರವು ಕಾರ್ಯಾಚರಣೆ

ಪಂಜ ಸಮೀಪದ ಕುಮಾರಧಾರ ನದಿಯಲ್ಲಿ ಕಾಡುಕೋಣದ ಕಳೇಬರ ತೇಲಿ ಬಂದ ಹಾಗೂ ಅರಣ್ಯ ಇಲಾಖೆಯ ಕಾರ್ಯಾಚರಣೆ ಮೂಲಕ ತೆರವುಗೊಳಿಸಿದ ಘಟನೆ ನಡೆದಿದೆ.

ಪುಳಿಕುಕ್ಕು ಸೇತುವೆಯ ಬಳಿ ಕಾಡು ಕೋಣದ ಮೃತದೇಹ ಇಂದು ಪತ್ತೆಯಾಯಿತು. ಅರಣ್ಯ ಇಲಾಖೆಯವರು ಕ್ರೇನ್ ಮೂಲಕ ನದಿಯಿಂದ ತೆರವು ಗೊಳಿಸಿ ,ಮಹಜರು ನಡೆಯಿತು.
ಎ.ಸಿ.ಎಫ್ ಪ್ರವೀಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ಗಿರೀಶ್, ಸಿಬ್ಬಂದಿಗಳು ಉಪಸ್ಥಿತರಿದ್ದರು.