ಅರಂಬೂರು ಮಜಿಗುಂಡಿಯಲ್ಲಿ ಬರೆ ಕುಸಿದು ಮನೆಗೆ ಹಾನಿ

ಸುಳ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಮಣ್ಣು ಹೊರ ತೆಗೆಯಲು ಸಹಕಾರ

0

ಆಲೆಟ್ಟಿ ಗ್ರಾಮದ ಮಜಿಗುಂಡಿ ಎಂಬಲ್ಲಿ ಅಶೋಕ್ ಎಂಬವರ ಮನೆಗೆ ಬರೆ ಕುಸಿದು ಮನೆಗೆ ಹಾನಿಯಾದ ಘಟನೆ ನಡೆದಿದೆ.
ಸ್ಥಳಕ್ಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕ ಸುಳ್ಯ ವಲಯದ ಸದಸ್ಯರು ಆಗಮಿಸಿ ಮಣ್ಣು ಹೊರ ತೆಗೆಯುವ ಕೆಲಸ ಮಾಡಿದರು.


ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿ ವಿಜಯಶ್ರೀ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
ವಿಪತ್ತು ನಿರ್ವಹಣಾ ಘಟಕದ ಸಂಯೋಜಕರಾದ ಪಿ.ಜಿ. ಜಯರಾಮ, ಸುರೇಶ್ ಪರಿವಾರಕಾನ,
ದಿನೇಶ್ ಅರಂಬೂರು, ರತೀಶ ಅರಂಬೂರು, ಪ್ರಶಾಂತ ಡಿ, ಪ್ರಶಾಂತ, ಕೌಶಿಕ್, ಭರತ, ಗುರುರಾಜ್, ಸದಸ್ಯರುಗಳು ಮಣ್ಣು ತೆಗೆಯುವ ಕೆಲಸದಲ್ಲಿ ಭಾಗವಹಿಸಿದರು.