ವಿನೋಬನಗರ : ರಾಷ್ಟ್ರೋತ್ಥನ ಶಿಶುಮಂದಿರ ಟ್ರಸ್ಟ್ ನ ನೂತನ ಆಡಳಿತ ಮಂಡಳಿ ರಚನೆ

0

ಅಧ್ಯಕ್ಷರಾಗಿ ಯಶ್ವಿತ್ ಕಾಳಮ್ಮನೆ ಆಯ್ಕೆ

ರಾಷ್ಟ್ರೋತ್ಥಾನ ಶಿಶುಮಂದಿರ ಟ್ರಸ್ಟ್ (ರಿ), ವಿನೋಬನಗರ ಜಾಲ್ಸೂರು ಇಲ್ಲಿನ‌ 2023-24 ನೇ ಸಾಲಿನ ಆಡಳಿತ ಮಂಡಳಿಯನ್ನು ಇತ್ತೀಚೆಗೆ ರಚಿಸಲಾಯಿತು.

ನೂತನ ಅಧ್ಯಕ್ಷರಾಗಿ ಸುದ್ದಿ ಬಿಡುಗಡೆ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ ಇವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಶ್ರೀಮತಿ ಸ್ವಾತಿ ಭಂಡಾರಿ, ಕಾರ್ಯದರ್ಶಿಯಾಗಿ ಶಿಶುಮಂದಿರದ ಮಾತಾಜಿ ಶ್ರೀಮತಿ ಬೇಬಿ ನಾಗೇಶ ರಾವ್, ಕೋಶಾಧಿಕಾರಿಯಾಗಿ ಸುಜ್ಯೋತಿ ಆಳಂಕಲ್ಯರನ್ನು ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಸುಧಾಕರ ಕಾಮತ್, ಗೌರವ ಸಲಹೆಗಾರರಾಗಿ ನ.ಸೀತಾರಾಮ, ಸದಸ್ಯರುಗಳಾಗಿ ಜಗದೀಶ್ ಆಚಾರ್ಯ ಅಡ್ಕಾರ್, ಪ್ರದೀಪ್ ಮಂಡೆಕೋಲು, ರತೀಶ್ ಪೇರಾಲು, ಲೋಲಾವತಿ ಕಣಪಿಲ, ಚಂದ್ರಾವತಿ, ಸೀಮಾ ಪೇರಾಲು,ಉಮೇಶ್ ಬೆಳ್ಳಿಪ್ಪಾಡಿ ಇವರನ್ನು ಆಯ್ಕೆ ಮಾಡಲಾಯಿತು.