ಆಲೆಟ್ಟಿ ಸಹಕಾರಿ ಸಂಘದ ಮಾಜಿ ನಿರ್ದೇಶಕ ಸೀತಾರಾಮ ಗೌಡ ಭೂತಕಲ್ಲು ನಿಧನ

0

ಆಲೆಟ್ಟಿ ಗ್ರಾಮದ ಭೂತಕಲ್ಲು ಮನೆತನದ ಹಿರಿಯರಾದ ಸೀತಾರಾಮ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೃತರು ಇಬ್ಬರು ಪುತ್ರರಾದ ಪದ್ಮಭೂಷಣ ಭೂತಕಲ್ಲು, ಸೋಮಶೇಖರ ಭೂತಕಲ್ಲು ಮತ್ತು ಪುತ್ರಿಯರಾದ ಶ್ರೀಮತಿ ಶಶಿಪ್ರಭಾ, ಶ್ರೀಮತಿ ಲತಾ, ಶ್ರೀಮತಿ ವೀಣಾ,
ಶ್ರೀಮತಿ ಶಕುಂತಲಾ, ಶ್ರೀಮತಿ ಪೂರ್ಣಿಮಾ,
ಅಳಿಯಂದಿರನ್ನು, ಸೊಸೆಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರು ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಪಕ್ಷದ ಧುರೀಣರಾಗಿ ಪ್ರಗತಿಪರ ಕೃಷಿಕರಾಗಿ ಸಾಮಾಜಿಕವಾಗಿ ಗುರುತಿಸಿಕೊಂಡು ಜನಾನುರಾಗಿಯಾಗಿದ್ದರು.