ಬೆಟ್ಟ ಯಾದವ ಸಭಾ ಪ್ರಾದೇಶಿಕ ಸಮಿತಿ ಮಹಾಸಭೆ

0

ಯಾದವ ಸಭಾ ತಾಲ್ಲೂಕು ಸಮಿತಿ ಸುಳ್ಯ ಇದರ ಪ್ರಾದೇಶಿಕ ಸಮಿತಿ ಬೆಟ್ಟದ ಮಹಾಸಭೆಯು ಜು 9ರಂದು ರಾಮಚಂದ್ರ ಮಣಿಯಾಣಿ ಬೆಟ್ಟರವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಚಂದ್ರಹಾಸ ಕೀಲಾರ್ಕಜೆ ವಹಿಸಿದರು. ಮುಖ್ಯ ಅತಿಥಿಯಾಗಿ ಯಾದವ ಸಭಾ ತಾಲ್ಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ, ಪ್ರಧಾನ ಕಾರ್ಯದರ್ಶಿ ಕೃಷ್ಣ ಬೆಟ್ಟ, ಯಾದವ ಸಭಾ ತಾಲ್ಲೂಕು ಸಮಿತಿ ಮಹಿಳಾ ಘಟಕದ ಕಾರ್ಯದರ್ಶಿ ಚಂಚಲಾಕ್ಷಿ, ಯುವ ವೇದಿಕೆ ಕಾರ್ಯದರ್ಶಿ ತೀರ್ಥೇಶ್, ಕೋಶಾಧಿಕಾರಿ ಜಗನ್ನಾಥ ಹೈದಂಗೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಾದವ ಸಭಾ ಕಾರ್ಯ ವೈಖರಿಯ ಬಗ್ಗೆ ತಾಲ್ಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪರೆ ತಿಳಿಸಿದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದು ವಿದೇಶದಲ್ಲೂ ಯಕ್ಷಗಾನ ಪ್ರದರ್ಶಿಸಿ ಸ್ವದೇಶಕ್ಕೆ ಆಗಮಿಸಿದ ಮಹೇಶ್ ಮಹಿಯಾಣಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಶೋಕ್ ಕೀಳಾರ್ ಕಜೆ ಸ್ವಾಗತಿಸಿ, ಕುಮಾರಿ ಮಾನ್ವಿ ಪ್ರಾರ್ಥಿಸಿ,ಕಾವ್ಯ ಅಶೋಕ್ ವರದಿ ವಡಿಸಿ, ಪ್ರಮೋದ್ ಬೊಳ್ಳಜೆ ವಂದಿಸಿ, ಕಾರ್ಯಕ್ರಮ ನಿರೂಪಣೆಯನ್ನು ಸುಮಿತ್ರ ಕೀಳಾರ್ ಕಜೆ ನಿರ್ವಹಿಸಿದರು.