ಮರ್ಕಂಜ : ಏಕಾಏಕಿ ರಸ್ತೆಗೆ ನುಗ್ಗಿದ ಕಡವೆ – ಬೈಕ್ ಢಿಕ್ಕಿ- ಸವಾರ ಜಖಂ

0

ದೊಡ್ಡತೋಟ – ಮರ್ಕಂಜ ರಸ್ತೆಯ ದೇಶಕೋಡಿ‌ ಎಂಬಲ್ಲಿ ಕಡವೆಯೊಂದು ಏಕಾಏಕಿ ರಸ್ತೆಗೆ ಬಂದ ಕಾರಣ ದ್ವಿಚಕ್ರ ಸವಾರ ಕಡವೆಗೆ ಗುದ್ದಿ ಗಾಯಗೊಂಡ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ನೆಲ್ಲೂರು ಕೆಮ್ರಾಜೆ ಗ್ರಾಮದ ಯತೀಶ ಮತ್ತು ಅವರು ಸಹೋದರ ಯೋಗೀಶರವರು ಮುಂಜಾನೆ ಅಂಗಡಿಗಳಿಗೆ ದಿನಪತ್ರಿಕೆ ತಲುಪಿಸುವ ಕೆಲಸ‌ ಮಾಡುತ್ತಿದ್ದು, ಇಂದು ಮುಂಜಾನೆ ಯತೀಶರವರು ಎಂದಿನಂತೆ ಪತ್ರಿಕೆ ತಲುಪಿಸುವ ವೇಳೆ ಈ ಘಟನೆ ನಡೆದಿದೆ. ಪರಿಣಾಮ ದ್ವಿಚಕ್ರ ವಾಹನ ಜಖಂಗೊಂಡಿದೆ. ಸವಾರನ ಕೈ ಜಖಂ ಆಗಿರುವುದಾಗಿ ತಿಳಿದು ಬಂದಿದೆ‌.