ಶುಭಲಕ್ಷ್ಮಿ ಪಿ.ಯವರಿಗೆ ಪಿ.ಹೆಚ್.ಡಿ‌ ಪದವಿ

0

ಮಂಗಳೂರಿನ ಎಸ್.ಡಿ.ಎಂ. ಕಾನೂನು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶುಭಲಕ್ಷ್ಮಿ ಪಿಯವರಿಗೆ ಪಿ.ಹೆಚ್.ಡಿ. ಪದವಿ ಲಭಿಸಿದೆ.


‘ವಿಶ್ವ ವ್ಯಾಪಾರ ಸಂಘಟನೆಯಡಿಯಲ್ಲಿ ವಿವಾದ ಇತ್ಯರ್ಥ ಕಾರ್ಯ ವಿಧಾನದ ಪರಿಣಾಮಕಾರಿತ್ವ : ಅಭಿವೃದ್ಧಿಶೀಲ ರಾಷ್ಟ್ರಗಳ ಕಾಳಜಿಯ ವಿಶೇಷ ಉಲ್ಲೇಖದೊಂದಿಗೆ ಒಂದು ಅಧ್ಯಯನ’ ಎಂಬ ವಿಷಯದ ಕುರಿತಾಗಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸಾದರಪಡಿಸಿದ ಮಹಾಪ್ರಬಂಧಕ್ಕೆ ಪಿ.ಹೆಚ್.ಡಿ. ಪದವಿ ಲಭಿಸಿದೆ. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ರಾಜೇಂದ್ರ ಕುಮಾರ್ ರವರ ಮಾರ್ಗದರ್ಶನ ನೀಡಿದ್ದರು.

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಪ್ರಾಧ್ಯಾಪಕರಾಗಿರುವ ಡಾ. ಗಿರೀಶ್ ಕೆ.ಸಿಯವರ ಪತ್ನಿಯಾಗಿರುವ ಶ್ರೀಮತಿ ಶುಭಲಕ್ಷ್ಮಿಯವರು ದೊಡ್ಡತೋಟ ಪಿ. ಕೃಷ್ಣ ಭಟ್ ಮತ್ತು ಶಾರದಾ ದಂಪತಿಯ ಪುತ್ರಿ.