ಕಲ್ಲಪಳ್ಳಿ-ಪಾಣತ್ತೂರು ರಸ್ತೆ ಸಂಚಾರ ಮತ್ತೆ ಬಂದ್- ಗುಡ್ಡದಲ್ಲಿ ಕಾಣಿಸಿಕೊಂಡ ಬಿರುಕು

0

ಸುಳ್ಯ-ಕಲ್ಲಪಳ್ಳಿ-ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಮೇಲೆ ಮಣ್ಣು ಕುಸಿದು ಸಂಚಾರ ಮತ್ತೆ ಬಂದ್ ಆಗಿದೆ.

ಕಲ್ಲಪಳ್ಳಿಯ ಬಾಟೋಳಿ ಬಳಿ ಕಳೆದ ಮೂರು ದಿನದ ಹಿಂದೆ ರಸ್ತೆಯ ಮೇಲೆ ಮಣ್ಣು ಕುಸಿದು ಸಂಚಾರಕ್ಕೆ ತೊಂದರೆಯಾಗಿತ್ತು. ಪಂಚಾಯತ್ ನೇತೃತ್ವದಲ್ಲಿ ತೆರವು ಕಾರ್ಯ ಕೈಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಗುಡ್ಡದಿಂದ ಮಣ್ಣು ಕುಸಿತ ಉಂಟಾಗಿ ರಸ್ತೆ ಬಂದ್ ಆಗಿ ವಾಹನ ಸಂಚಾರಕ್ಕೆಅಡಚಣೆಯಾಗಿದೆ.


ಗುಡ್ಡದ ಮೇಲ್ಭಾಗದಲ್ಲಿ ಬಿರುಕುಕಾಣಿಸಿಕೊಂಡಿದ್ದು ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇದರಿಂದಾಗಿ ಈ ರಸ್ತೆಯ ಮೂಲಕ ಸಂಚಾರ ಅಪಾಯಕಾರಿಯೆಂದು ಸೂಚಿಸಲಾಗಿದೆ.