ನೆಲ್ಲೂರು ಕೆಮ್ರಾಜೆ ಸೊಸೈಟಿಯಲ್ಲಿ ಅನರ್ಹಗೊಂಡ ಓರ್ವ ನಿರ್ದೇಶಕ – ಕೋ-ಆಪ್ಟ್ ಮೂಲಕ ಚಂದ್ರ ದಾಸನಕಜೆ ನೇಮಕ

0

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಚುನಾವಣೆಯ ಮೂಲಕ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಹರ್ಷಿತ್ ಎ.ಟಿ.ಯವರು ಸಾಮಾನ್ಯ ಸಭೆಗೆ ಹಾಜರಾಗದೇ ಇರುವ ಕಾರಣ ನಿರ್ದೇಶಕ ಸ್ಥಾನದಿಂದ‌ ಅನರ್ಹಗೊಂಡಿರುವುದಾಗಿ ತಿಳಿದು ಬಂದಿದೆ. ಹರ್ಷಿತ್ ರವರು ಉದ್ಯೋಗ ನಿಮಿತ್ತ ಬೆಂಗಳೂರಿಗೆ‌ ಹೋದ ಕಾರಣ ಸಾಮಾನ್ಯ ಸಭೆಗೆ ಹಾಜರಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಅವರ ಸ್ಥಾನಕ್ಕೆ‌ ಚಂದ್ರ ದಾಸನಕಜೆಯವರನ್ನು‌ ಕೋ ಆಪ್ಟ್ ಮೂಲಕ ನಿರ್ದೇಶಕರನ್ನಾಗಿ ಆಡಳಿತ ಮಂಡಳಿ ಆಯ್ಕೆ‌ಮಾಡಿದೆ.

ಚಂದ್ರ ದಾಸನಕಜೆಯವರು ನೆಲ್ಲೂರು ಕೆಮ್ರಾಜೆ ಗ್ರಾಮದ ಗೋಪಾಲ ಮಣಿಯಾಣಿ ಮತ್ತು‌ ರಾಜೀವಿಯವರ ಪುತ್ರ.