ಬಾಳುಗೋಡು ವಿಶ್ವ ಯುವಕ ಮಂಡಲದ ಅಧ್ಯಕ್ಷರಾಗಿ ರಾಜೇಶ್ ಕಿರಿಭಾಗ, ಕಾರ್ಯದರ್ಶಿ ಅಜೇಯ ಪೊಯ್ಯಮಜಲು

0

ವಿಶ್ವ ಯುವಕ ಮಂಡಲ ಬಾಳುಗೋಡು ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ಅಧ್ಯಕ್ಷರಾಗಿ ರಾಜೇಶ್ ಕಿರಿಭಾಗ ಇವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಶಿವಕುಮಾರ್ ಶಿವಾಲ, ಕಾರ್ಯದರ್ಶಿಯಾಗಿ ಅಜೇಯ ಪೊಯ್ಯಮಜಲು,
ಜತೆ ಕಾರ್ಯದರ್ಶಿ ಕಾರ್ತಿಕ್ ಮುಚ್ಚಾರ ಹಾಗೂ ಖಜಾಂಜಿಯಾಗಿ ಅನಿಲ್ ಕುಮಾರ್ ಬೆಟ್ಟುಮಕ್ಕಿ ಅವರನ್ನು ಆಯ್ಕೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯದರ್ಶಿಯಾಗಿ-ದಿನೇಶ್ ಕಿರಿಭಾಗ, ಸಾಂಸ್ಕೃತಿಕ ಸಹ ಕಾರ್ಯದರ್ಶಿಯಾಗಿ ನಿತೀಶ್ ಬೆಟ್ಟುಮಕ್ಕಿ, ಮಾಧ್ಯಮ ಸಲಹೆಗಾರರಾಗಿ ಅವಿನ್ ಕಿರಿಭಾಗ, ಕ್ರೀಡಾ ಕಾರ್ಯದರ್ಶಿಯಾಗಿ ಮಿಥುನ್ ಕಟ್ಟೆಮನೆ, ಜತೆ ಕ್ರೀಡಾ ಕಾರ್ಯದರ್ಶಿಯಾಗಿ ಅಖಿಲ್ ಬಾಳುಗೋಡು, ವ್ಯವಸ್ಥಾ ಕಾರ್ಯದರ್ಶಿ ದೀಪಕ್ ಬಾಳುಗೋಡು,
ಕಾರ್ಯಾಲಯ ಕಾರ್ಯದರ್ಶಿ ಯಾಗಿ ಯಕ್ಷಿತ್ ಬೆಟ್ಟುಮಕ್ಕಿ ಇವರುಗಳನ್ನು ಆಯ್ಕೆ ಮಾಡಲಾಯಿತು.


ಗೌರವ ಅಧ್ಯಕ್ಷರಾಗಿ ರಾಧಾಕೃಷ್ಣ ಕಟ್ಟೆಮನೆ ಹಾಗೂ ಗೌರವ ಸಲಹೆಗಾರರಾಗಿ ವಸಂತ ಕಿರಿಭಾಗ, ಶಿಶಿರ್ ಕಟ್ಟೆಮನೆ, ಪ್ರಸನ್ನ ಗೊರ್ತಿಲ ಇವರುಗಳು ಆಯ್ಕೆಯಾಗಿದ್ದಾರೆ.