ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಕನಾ೯ಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸ. ಕಿ‌.ಪ್ರಾ. ಶಾಲೆ ಕಿರ್ಲಾಯ ದಲ್ಲಿ ಆಚರಿಸಲಾಯಿತು.ದ್ವಜರೊಹಣವನ್ನು ನಿವೃತ್ತ ಸೇನಾನಿ ಶಿವಲಿಂಗೇಗೌಡ ಕೆ ಬಿ ನೇರವೆರಿಸಿದರು.

ನಂತರ ಸಭಾ ಕಾರ್ಯಕ್ರಮವನ್ನು ನಡೆಸಲಾಯಿತು. ನಿವೃತ್ತ ಸೇನಾನಿ ಶಿವಲಿಂಗೇಗೌಡ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಅ.ರ.ವೇದಿಕೆಯ ಜಿಲ್ಲಾಧ್ಯಕ್ಷ ಸುಂದರ್ ಪಾಟಾಜೆ ವಹಿಸಿದ್ದರು.

ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕಿ ಲೋಲಾಕ್ಷಿ,ಎಸ್ ಡಿ ಎಂ ಸಿ ಉಪಾಧ್ಯಕ್ಷ ಪುಷ್ಪಾವತಿ,ನಾಗಪಟ್ಟಣ ಘಟಕದ ಅಧ್ಯಕ್ಷ ಚಂದ್ರಶೇಖರ,ಅರಂತೋಡು ಘಟಕದ ಅಧ್ಯಕ್ಷ ನವೀನ್ ಉಪಸ್ಥಿತರಿದ್ದರು.

ಸಂಘಟನೆಯ ವತಿಯಿಂದ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಅರಂತೋಡು ಘಟಕದ ಕಾರ್ಯದರ್ಶಿ ರಾಮಕೃಷ್ಟ ಅರಮನೆಗಯಉಪಾಧ್ಯಕ್ಷ ಚಂದ್ರಶೇಖರ ಕೊಂಪುಳಿ,ಸದಸ್ಯರುಗಳಾದ ಬಾಲಕೃಷ್ಟ ಜೊಗಿಮೂಲೆ,ಕೊರಗಪ್ಪ ಮಿತ್ತಡ್ಕ, ರಾಧಾಕೃಷ್ಣ ಅರಮನೆಗಯ, ಲಕ್ಮೀಶ್ ಬಳ್ಳಕಾನ,ಲೊಕೇಶ್ ಅರಮನೆಗಯ,ಶೇಷಪ್ಪ ಅರಮನೆಗಯ,ಚಿದಾನಂದ ಮೊಡಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ತೇಜಕುಮಾರ್ ಸ್ವಾಗತಿಸಿ ನವೀನ್ ಕಲ್ಲುಗುಡ್ಡೆ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು, ಪೋಷಕ ವೃಂದದವರು, ಎಸ್ ಡಿ ಎಂ ಸಿ ಸದಸ್ಯರು, ಸಂಘಟನೆಯ ಸದಸ್ಯರುಗಳು ಭಾಗವಹಿಸಿದ್ದರು.