ಪಂಜ ಲಯನ್ಸ್ ಕ್ಲಬ್ ವತಿಯಿಂದ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

0

ಲಯನ್ಸ್ ಕ್ಲಬ್ ಪಂಜ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪಂ ಬೆತ್ತಾಡಿ, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ,ಅಕ್ಷತಾ ಯುವತಿ ಮಂಡಲ ಪಂಬೆತಾಡಿ, ಅಮೃತ ಮಹಿಳಾ ಮಂಡಲ ಪಂಬೆತಾಡಿ, ಭಾರತೀಯ ಇಲಾಖೆ ಪುತ್ತೂರು ವಿಭಾಗ, ಇವುಗಳ ಸಹಯೋಗದೊಂದಿಗೆ, ಆ.19
ರಂದು ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಆಧಾರ್ ನೊಂದಣಿ ಹಾಗೂ ತಿದ್ದುಪಡಿ ಶಿಬಿರವು ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕಳ ಉದ್ಘಾಟಿಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷರಾದ ದಿಲೀಪ್ ಬಾ ಬ್ಲುಬೆಟ್ಟು ರವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ವಲಯ ಅಧ್ಯಕ್ಷ ಸಂತೋಷ್ ಜಾಕೆ,ಹಾಗೂ ಪಂಬೇತ್ತಾಡಿ ಅಂಚೆ ಪಾಲಕರಾದ ಜನಾರ್ಧನ ಬೆಳಗಜೆ ಉಪಸ್ಥಿತರಿದ್ದರು, ಈ ಕಾರ್ಯಕ್ರಮದಲ್ಲಿ ಸುಮಾರು 80 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಕಾರ್ಯದರ್ಶಿ ಲಯನ್ ವಾಸುದೇವ ಮೇ ಲ್ಪಾಡಿ , ಕೋಶಾಧಿಕಾರಿ ಆನಂದ ಜಳಕದೊಳೆ ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲು ಬೆಟ್ಟು ಸ್ವಾಗತಿಸಿ, ಕಾರ್ಯದರ್ಶಿ ವಾಸುದೇವ ಮೆಲ್ಪಾಡಿ ವಂದಿಸಿದರು.