ಸುಬ್ರಹ್ಮಣ್ಯ: ಶ್ರೀಕೃಷ್ಣಾಷ್ಠಮಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ, ಕಾರ್ಯದರ್ಶಿಯಾಗಿ ವಿನ್ಯಾಸ್ ಹೊಸೋಳಿಕೆ ಆಯ್ಕೆ

0

ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಠಮಿ ಉತ್ಸವ ಸಮಿತಿ ಸುಬ್ರಹ್ಮಣ್ಯ ಇದರ ಮಹಾಸಭೆಯು ಸಮಿತಿಯ ಸ್ಥಾಪಕಾಧ್ಯಕ್ಷ ಉಮೇಶ್ ಕೆ.ಎನ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಶಾಂತ್ ಆಚಾರ್ಯ ಆಯ್ಕೆಯಾದರು. ಕಾರ್ಯದರ್ಶಿಯಾಗಿ ವಿನ್ಯಾಸ್ ಹೊಸೋಳಿಕೆ ನೇಮಕಗೊಂಡರು.
ಉಳಿದಂತೆ ಸುಹಾಸ್ ಎಚ್.ಎಲ್, ಜಯರಾಮ ಎಚ್ ಎಲ್ ಶೇಖರ್ ಸುಬ್ರಹ್ಮಣ್ಯ ಉಪಾಧ್ಯಕ್ಷರಾಗಿ, ರತ್ನಾಕರ ಸುಬ್ರಹ್ಮಣ್ಯ ಸಂಚಾಲಕರಾಗಿ, ದಿನೇಶ್ ಮೊಗ್ರ ಕೋಶಾಧಿಕಾರಿಯಾಗಿ, ದೇವಿಚರಣ್ ಕಾನಡ್ಕ ಸಹಕೋಶಾಧಿಕಾರಿ, ಗಣೇಶ್ ಕಾಶಿಕಟ್ಟೆ ಜತೆ ಕಾರ್ಯದರ್ಶಿ ಆಯ್ಕೆಯಾದರು.