ಕೇರ್ಪಳ : ಶ್ರೀ ದುರ್ಗಾಪರಮೇಶ್ವರಿ ನವೀಕೃತ ಕಲಾಮಂದಿರದ ಲೋಕಾರ್ಪಣೆ

0

ಸುಳ್ಯದ ಕೇರ್ಪಳದಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ನವೀಕೃತ ಕಲಾಮಂದಿರ ಆ.25ರಂದು ಲೋಕಾರ್ಪಣೆ ಗೊಂಡಿತು.

ಮಾಜಿ ಎಂಎಲ್ ಸಿ ಅಣ್ಣ ವಿನಿಯಚಂದ್ರ ನವೀಕೃತ ಕಲಾಮಂದಿರವನ್ನು ಲೋಕಾರ್ಪಣೆ ಗೊಳಿಸಿದರು. ಇ-ಲೈಬ್ರೆರಿಯ ಉದ್ಘಾಟನೆಯನ್ನು ಬೆಂಗಳೂರು ರಾಜಾಪುರ ಸಾರಸ್ವರ ಸಮಾಜದ ಉಪಾಧ್ಯಕ್ಷ ಅಶೋಕ್ ಪ್ರಭು ಕುಂಟಿನಿ ಇವರು ನೆರವೇರಿಸಿದರು. ವಿದ್ಯಾರ್ಥಿ ನಿಲಯದ ವಿಸ್ತರಣಾ ಕೊಠಡಿಯನ್ನು ಸುಳ್ಯ ಶಾಖೆಯ ಎಲ್ ಐಸಿ ಶಾಖಾ ವ್ಯವಸ್ಥಾಪಕರಾದ ದೇವಿಪ್ರಸಾದ್ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಭಾ.ರಾ.ಸಾ.ಸಮಾಜದ ಅಧ್ಯಕ್ಷರಾದ ಹೇಮಂತ್ ಕುಮಾರ್ ಕಂದಡ್ಕ ನೆರವೇರಿಸಿದರು. ಕರ್ಣಾಟಕ ಬ್ಯಾಂಕ್ ನ ಶಾಖಾ ಪ್ರಬಂಧಕರಾದ ವಿಠಲ ವಾಗ್ಲೆ‌ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಪುತ್ತೂರು ಕೇಂದ್ರಿಯ ಸಮಿತಿಯ ಅಧ್ಯಕ್ಷ ಉಮೇಶ ಪ್ರಭು, ಬೆಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ‌ ದೇವಾಸ್ಥಾನದ ಅಧ್ಯಕ್ಷರಾದ ಡಾ| ರಾಮಕೃಷ್ಣ ಬೋರ್ಕಾರ್ ಉಪಸ್ಥಿತರಿದ್ದರು. ಇದೇ ದಿನ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯು‌ ನಡೆಯಿತು.
ಕಾರ್ಯಕ್ರಮದಲ್ಲಿ ಭಾಲಾವಲೀಕರ್\ರಾಜಾಪುರ ಸಾರಸ್ವತ ಸಮಾಜ, ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ, ಭಾಲಾವಲೀಕರ್\ರಾಜಾಪುರ ಯುವ ಸಾರಸ್ವತ ಸಮಾಜ, ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಸದಸ್ಯರು, ಸಮಾಜ ಬಾಂಧವರು ಉಪಸ್ಥಿತರಿದ್ದರು.