ಕುದ್ರೆಪಾಯ : ನಾಪತ್ತೆಯಾದ ವ್ಯಕ್ತಿ ಕಾಡಿನಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆ – ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ್ಯು

0

ಮಡಿಕೇರಿ ತಾಲೂಕು ಎಂ.ಚೆಂಬು ಗ್ರಾಮದ ಕುದ್ರೆಪಾಯ ಅಪ್ಪಣ್ಣ ನಾಯ್ಕ ಎಂಬವರು ಆ.23ರಂದು ನಾಪತ್ತೆಯಾಗಿದ್ದು, ಇಂದು ಅವರು ಅಸ್ವಸ್ಥ ಸ್ಥಿತಿಯಲ್ಲಿ ಕಂಡು ಬಂದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ.

ಅಪ್ಪಣ್ಣ ನಾಯ್ಕರು ಆ.23 ರಂದು ಬೆಳಗ್ಗಿನ ಜಾವ 4 ಗಂಟೆ ಯಿಂದ ನಾಪತ್ತೆಯಾಗಿದ್ದರು. ಮನೆಯವರು ವಾಪಸು ಬಾರದಿದ್ದಾಗ ಊರವರು ಹುಡುಕಾಟ ನಡೆಸಿದರೂ ಪತ್ತೆಯಾಗಲಿಲ್ಲ. ಈ ಬಗ್ಗೆ ಕೊಡಗು ಸಂಪಾಜೆ ಪೊಲೀಸ್ ಹೊರ ಠಾಣೆ ಯಲ್ಲಿ ದೂರು ನೀಡಲಾಗಿತ್ತು.

ಆದರೆ ‌ಮನೆಯವರು‌ ಹುಡುಕಾಟ ನಿಲ್ಲಿಸಿರಲಿಲ್ಲ. ಇಂದು‌ ಮನೆಯ ಪಕ್ಕದಲ್ಲಿರುವ ‌ಕಾಡಿನಲ್ಲಿ‌ ಹುಡುಕಾಟ‌ ನಡೆಸಿದಾಗ ಅವರು ಅಸ್ವಸ್ಥ ಸ್ಥಿತಿಯಲ್ಲಿ ಕಂಡು‌ಬಂದರು. ಅವರನ್ನು ಆಸ್ಪತ್ರೆಗೆ ಸುಳ್ಯಕ್ಕೆ ಕರೆತಂದಾಗ ಪರೀಕ್ಷಿಸಿದ ವೈದ್ಯರು‌ ಅಪ್ಪಣ್ಣ ನಾಯ್ಕರು ಮೃತಪಟ್ಟಿರುವುದನ್ನು ದೃಢ ಪಡಿಸಿದರೆಂದು ತಿಳಿದುಬಂದಿದೆ.