ಅಪಾಯಕ್ಕೆ ಆಹ್ವಾನ ನೀಡುತ್ತಿದೆಪಂಜಿಕಲ್ಲು- ಮೈತಡ್ಕ ತೂಗು ಸೇತುವೆ

0

ಅನಾಹುತ ಸಂಭವಿಸುವ ಮೊದಲು ದುರಸ್ತಿ ಪಡಿಸುವಂತೆ ಸಾರ್ವಜನಿಕರ ಆಗ್ರಹ

ಮಂಡೆಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಜಿಕಲ್ಲು -ಮೈತಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ನಿರ್ಮಿಸಲಾದ ತೂಗು ಸೇತುವೆಯು ಇದೀಗ ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಈ ಭಾಗದ ಸಂಪರ್ಕದ ರಸ್ತೆಯು ಇದಾಗಿದ್ದು
ದಿನ ನಿತ್ಯ ನೂರಾರು ಮಂದಿ ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳು ಇದೇ ತೂಗು ಸೇತುವೆಯಲ್ಲಿ ಸಂಚರಿಸುತ್ತಿರುತ್ತಾರೆ.
ಈ ಸೇತುವೆಯ ಒಂದು ಬದಿಯಲ್ಲಿ ಮೇಲ್ಭಾಗಕ್ಕೆ ನಡೆದುಕೊಂಡು ಹೋಗಲು ಹಾಸಿರುವ ಸಿಮೆಂಟ್ ಸ್ಯ್ಲಾಬ್ ಒಡೆದು ಹೋಗಿ ತಿಂಗಳು ಎರಡು ಕಳೆದಿದೆ.
ಈ ಸೇತುವೆಯನ್ನೇ ಅವಲಂಬಿತರಾಗಿರುವ
ನಾಗರಿಕರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಸ್ವಲ್ಪ ಯಾಮಾರಿದರೂ ಕಬ್ಬಿಣದ ರಾಡಿನ ಮಧ್ಯೆ ಕಾಲು ಸಿಕ್ಕಿ ಹಾಕಿಕೊಂಡು ಅನಾಹುತ ಸಂಭವಿಸುವ ಸಾಧ್ಯತೆ ಇದೆ.
ಮಹಿಳೆಯರು, ಮಕ್ಕಳು ನಡೆದಾಡುವ ಸೇತುವೆ ಅಪಾಯಕಾರಿಸ್ಥಿತಿಯಲ್ಲಿದ್ದರೂಈಬಗ್ಗೆಜನಪ್ರತಿನಿಧಿಗಳಾಗಲಿ,ಅಧಿಕಾರಿಗಳಾಗಲಿ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿ ಕೊಂಡಿದ್ದಾರೆ.
ಈ ಬಗ್ಗೆ ನಿರ್ಲಕ್ಷ್ಯ ವಹಿಸದೆ ಶೀಘ್ರವಾಗಿ ದುರಸ್ತಿ ಕಾರ್ಯ ಕೈಗೆತ್ತಿಕೊಂಡು ಸೂಕ್ತ ವ್ಯವಸ್ಥೆಕಲ್ಪಿಸಿಕೊಡುವಂತೆ ಈ ಭಾಗದ ಸಾರ್ವಜಿನಿಕರು ಆಗ್ರಹಿಸಿರುತ್ತಾರೆ.