ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಶಿಕ್ಷಕರಿಗೆ ಸನ್ಮಾನ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸೆ. 5ರಂದು ಶಿಕ್ಷಕರನ್ನು ಸನ್ಮಾನಿಸಲಾಯಿತು.
ಜನ ಮೆಚ್ಚಿದ ನಿವೃತ್ತ ಶಿಕ್ಷಕ ಪದ್ಮನಾಭ ಎಂ ಮತ್ತು ನ್ಯಾಷನಲ್ ಬೆಸ್ಟ್ ಟೀಚರ್ಸ್ ಅವಾರ್ಡ್ ಹಾಗೂ ಸಿಎನ್ಆರ್ ರಾವ್ ನ್ಯಾಷನಲ್ ಬೆಸ್ಟ್ ಸೈನ್ಸ್ ಟೀಚರ್ಸ್ ಅವಾರ್ಡ್ ಪ್ರಶಸ್ತಿ ಪಡೆದ

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲಾ ನಿವೃತ್ತ ಶಿಕ್ಷಕ ಪುರಂದರ ನಾರಾಯಣ ಭಟ್ ರವರನ್ನು ಅವರ ಮನೆಯಲ್ಲಿ ಫಲ, ಪುಷ್ಪ ನೀಡಿ ಸನ್ಮಾನಿಸಲಾಯಿತು ಕ್ಲಬ್‌ನ ಅಧ್ಯಕ್ಷ ವಿಠ್ಠಲ್ ಶೆಟ್ಟಿ, ಕಾರ್ಯದರ್ಶಿ ದಯಾನಂದ ನಾಯ್ಕ, ಕೋಶಾಧಿಕಾರಿ ಪದ್ಮನಾಭ ಶೆಟ್ಟಿ, ಲ. ಹೊನ್ನಪ್ಪ ಬೆಳ್ಳಾರೆ, ಲಯನ್ ವಿಲಾಸ್ ರೈ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.