ಪಂಬೆತ್ತಾಡಿ ಸೊಸೈಟಿ ಪಿಗ್ಮಿ ಕಲೆಕ್ಟರ್ ಗಿರೀಶ್ ಮೊಡಪ್ಪಾಡಿ ನಿಧನ

0

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪಿಗ್ಮಿ ಕಲೆಕ್ಟರ್ ಪಂಬೆತ್ತಾಡಿ ಗ್ರಾಮದ ಮೊಡಪ್ಪಾಡಿ ಲಿಂಗಪ್ಪ ಗೌಡ ಮತ್ತು ಶ್ರೀಮತಿ ಹೊನ್ನಮ್ಮ ದಂಪತಿಗಳ ಪುತ್ರ ಗಿರೀಶ್ (42ವ) ರವರು ಇಂದು(ಸೆ.8 ರಂದು) ಮುಂಜಾನೆ ಅವರ ಮನೆ ಸಮೀಪ ಅಡಿಕೆ ತೋಟದಲ್ಲಿ ಕುಸಿದು ಬಿದ್ದು ಮೃತ ಪಟ್ಟ ಘಟನೆ ವರದಿಯಾಗಿದೆ.

ತಕ್ಷಣ ಅವರನ್ನು ಕಾಣಿಯೂರು ಆಸ್ಪತ್ರೆಗೆ ಸೇರಿಸಲಾಗಿದ್ದು ಆದರೆ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಸುಬ್ರಹ್ಮಣ್ಯ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು ಸಾವಿಗೆ ಕಾರಣ ತಿಳಿದು ಬರಬೇಕಷ್ಟೆ. ಮೃತರು ತಂದೆ, ತಾಯಿ, ಪತ್ನಿ ಶ್ರೀಮತಿ ಪ್ರಮೀಳಾ, ಪುತ್ರ ನಿದೀಪ್, ಪುತ್ರಿ ಸಿಂಚನ, ಸಹೋದರ ದೇವಪ್ಪ, ಸಹೋದರಿ ಶ್ರೀಮತಿ ಪಾರ್ವತಿ, ಕುಟುಂಬಸ್ಥರು, ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.