ಮರ್ಕಂಜದ ಮಿನುಂಗೂರು ದೇವಾಲಯದ ವಠಾರದಲ್ಲಿ 27ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

0

ಅಡ್ಡ ಕಂಬ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳು – ಬಲಿವಾಡು‌ಕೂಟ

ಮರ್ಕಂಜದ ಮಿನುಂಗೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ವತಿಯಿಂದ ಹಾಗೂ ದೇವಾಲಯದ ಎಲ್ಲಾ ಸಮಿತಿಗಳ ನೇತೃತ್ವದಲ್ಲಿ
27ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ.6ರಂದು ನಡೆಯಿತು.
ಕಾರ್ಯಕ್ರಮವನ್ನು ದೇವಾಲಯದ ಪ್ರಧಾನ ಅರ್ಚಕ ಗಣೇಶ್ ಪ್ರಸಾದ್ ಭಟ್ ದೀಪ‌ಬೆಳಗಿಸಿ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ಮಹೇಶ್ ಪುರ, ಅನ್ನಪೂರ್ಣ ಸಮಿತಿಯ ಅಧ್ಯಕ್ಷ ದಯಾನಂದ‌ ಪುರ, ಸೇವಾ ಸಮಿತಿಯ ಅಧ್ಯಕ್ಷ ಕಮಾಲಕ್ಷ ಪುರ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ಕಾರ್ಯಕ್ರಮದ ಪ್ರಯುಕ್ತ ಅಡ್ಡ ಕಂಬ ಹಾಗೂ ವಿವಿಧ ಸ್ಪರ್ಧೆಗಳು, ಸಭಾ ಕಾರ್ಯಕ್ರಮ ನಡೆಯಿತು.‌ ಮಧ್ಯಾಹ್ನ ಶ್ರೀ ದೇವಿಗೆ ವಿಶೇಷ ಪೂಜೆ, ‌ಬಲಿವಾಡು ಕೂಟ ನಡೆಯಿತು. ‌


ಸಂಜೆ ಸಮಾರೋಪ‌ ಸಮಾರಂಭದ ಅಧ್ಯಕ್ಷತೆಯನ್ನು ಮಿನುಂಗೂರು ‌ಶ್ರೀ‌ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ಮಹೇಶ್ ಪುರ ವಹಿಸಿದ್ದರು. ‌
ಮುಖ್ಯ ಅತಿಥಿಗಳಾಗಿ ಮರ್ಕಂಜ ಗ್ರಾ.ಪಂ. ಅಧ್ಯಕ್ಷೆ ಗೀತಾ‌ ಹೊಸೊಳಿಕೆ, ಮುಡ್ನೂರು ಮರ್ಕಂಜ ಶಾಲೆಯ ಮುಖ್ಯೋಪಾಧ್ಯಾಯರಾದ ದೇವರಾಜ್, ಮಿತ್ತಡ್ಕ ಮರ್ಕಂಜ ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ, ಮರ್ಕಂಜ ಪ್ರೌಢಶಾಲೆಯ ದೈ.ಶಿಕ್ಷಕ ಗಣೇಶ ಮಾವಜಿ, ನಿವೃತ್ತ ಮುಖ್ಯ ಗುರುಗಳಾದ ಗಣೇಶ ಅಡ್ತಲೆ, ಮಿನುಂಗೂರು ದೇವಾಲಯದ ಜೀರ್ಣೋದ್ಧಾರ ಸೇವಾ ಸಮಿತಿಯ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜ ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಗೋವಿಂದ ಅಳವುಪಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಇದೇ ಸಂದರ್ಭ ಬಹುಮಾನ ವಿತರಣೆ ನಡೆಯಿತು. ‌
ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಸಮಿತಿಗಳ ಸದಸ್ಯರು, ಊರವರು ಪಾಲ್ಗೊಂಡಿದ್ದ ರು.