ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವ್ಹೀಲ್ ಚಯರ್ ವಿತರಣೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ವಲಯ, ಪರಿವಾರಕಾನ ಒಕ್ಕೂಟದ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ. ಅಮ್ಮನವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವ್ಹೀಲ್ ಚಯರ್ ವಿತರಣಾ ಕಾರ್ಯಕ್ರಮವು ಅರಂಬೂರಿನ ಧರ್ಮಾರಣ್ಯದ ಶ್ರೀ ಗುರುಗಣಪತಿ ಸಭಾಭವನದಲ್ಲಿ ಸೆ.17ರಂದು ಜರುಗಿತು.

ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು
‌ಈ ಸಂದರ್ಭದಲ್ಲಿ ಜನಮಂಗಲ ಕಾರ್ಯಕ್ರಮದಡಿಯಲ್ಲಿ ಮಂಜೂರಾದ ವ್ಹೀಲ್ ಚಯರನ್ನು ಶಾಸಕರು ಫಲನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಬಾಲಚಂದ್ರ ಪಿ. ಟಿ, ಗೋಪಾಲಕೃಷ್ಣ ಭಟ್, ಶ್ರೀಪತಿ ಭಟ್ ಮಜಿಗುಂಡಿ, ನಾಗೇಶ್ ಪಿ, ಲೋಕನಾಥ ಅಮೆಚೂರು, ಕೃಷ್ಣ ಬೆಟ್ಟ, ಜಗದೀಶ್ ಸರಳಿಕುಂಜ, ನಿತ್ಯಾನಂದ ಕಲ್ಲೆಂಬಿ, ಪಿ.ಜಿ. ಜಯರಾಮ, ವಿಜಯ ಸರಳಿಕುಂಜ, ಗಣೇಶ್ ಬಿ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸೇರಿದಂತೆ ಫಲನುಭವಿಗಳು ಉಪಸ್ಥಿತರಿದ್ದರು.