ನಿಂತಿಕಲ್ಲು: ಕೆ.ಎಸ್ ಗೌಡ ಪ.ಪೂ. ಕಾಲೇಜಿಗೆ ಪ.ಪೂ. ಶಿಕ್ಷಣ ಇಲಾಖೆ ಮತ್ತು ಪ್ರಾಚಾರ್ಯರ ಸಂಘದಿಂದ ಪ್ರಶಸ್ತಿ

0


ನಿಂತಿಕಲ್ಲಿನ ವರ್ಷ ನಗರದದಲ್ಲಿರುವ ಕೆ.ಎಸ್ ಗೌಡ ಪದವಿ ಪೂರ್ವ ಕಾಲೇಜು 2022– 23 ನೇ ಶೈಕ್ಷಣಿಕ ವರ್ಷದಲ್ಲಿ ಸತತವಾಗಿ ಶೇಕಡಾ ನೂರು ಫಲಿತಾಂಶ ಪಡೆದು ಸಾಧನೆ ಮಾಡಿರುವುದನ್ನು ಗುರುತಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಪ್ರಾಚಾರ್ಯರ ಸಂಘದಿಂದ ಸೆ. 17ರಂದು ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸದಾನಂದ ರೈ ಕೂವೆಂಜ ಮತ್ತು ಉಪನ್ಯಾಸಕಿಯರಾದ ಧನ್ಯ ಕೆ.ವಿ, ವೇದಾವತಿ ಎಸ್, ಪ್ರಿಯಾ ಎಂ, ಜಯಶ್ರೀ ಪಿ ವಿ ಯವರಿಗೆ ಪ್ರಶಸ್ತಿ, ಫಲಕ, ಸನ್ಮಾನ ಪತ್ರ ನೀಡಿ ಎಂ.‌ಎಲ್.ಸಿ ಭೋಜೇ ಗೌಡ, ಬೆಂಗಳೂರು ನಿರ್ದೇಶಕರ ಕಚೇರಿಯ ಸಹಾಯಕ ನಿರ್ದೇಶಕರಾದ ಆನಂದ, ಉಪ ನಿರ್ದೇಶಕರಾದ ಜಯಣ್ಣ ಸಿ.ಡಿ ಮತ್ತಿತರ ಗಣ್ಯರು ಗೌರವಿಸಿದರು.