ದುಗ್ಗಲಡ್ಕ: ಯುವ ಕಲಾವಿದ ರಚಿಸಿದ ಗಣೇಶನಿಗೆ ಮನೆಯಲ್ಲೇ ಉತ್ಸವ

0


ದುಗ್ಗಲಡ್ಕ ಸಮೀಪದ ಮೂಡೆಕಲ್ಲಿನಲ್ಲಿ ಯುವ ಕಲಾವಿದ ರಚಿಸಿದ ಗಣೇಶನನ್ನು ಪ್ರತಿವರ್ಷದಂತೆ ಮನೆಯಲ್ಲೇ ಪ್ರತಿಷ್ಠೆ ಮಾಡಿ, ಪೂಜಾ ಕಾರ್ಯಗಳನ್ನು ನಡೆಸಿ ಜಲಸ್ಭಂಭನಗೊಳಿಸಲಾಯಿತು.
ದುಗ್ಗಲಡ್ಕ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ದಯಾನಂದ ಸಾಲಿಯಾನ್ ಪುತ್ರ ಅಮೃತ್ ಸಾಲಿಯಾನ್ ಚಿತ್ರ ಕಲಾವಿದನಾಗಿದ್ದು, ಅವರು ಹಲವಾರು ಚಿತ್ರಗಳಿಗೆ ರಚಿಸಿ ಜೀವ ತುಂಬಿದ್ದಾರೆ.

ಅದರೊಂದಿಗೆ ಗಣೇಶ ವಿಗ್ರಹವನ್ನು ಹಾಗೂ ಇತರ ವಿಗ್ರಹಗಳನ್ನು ಮಾಡುತ್ತಿದ್ದಾರೆ.ಪ್ರತಿವರ್ಷ ಗಣೇಶನ ವಿಗ್ರಹವನ್ನು ತಯಾರಿಸಿ ಮನೆಯಲ್ಲೇ ಗಣೇಶೋತ್ಸವ ಮಾಡುತ್ತಿದ್ದಾರೆ.
ಸೆ‌.20ರಂದು ಮೂಡೆಕಲ್ಲು ಮನೆಯಲ್ಲಿ ಅವರೇ ರಚಿಸಿದ ಗಣೇಶ ವಿಗ್ರಹವನ್ನು ಪ್ರತಿಷ್ಠೆ ಮಾಡಿ, ಪೂಜೆ ನೆರವೇರಿಸಿ, ಜಲಸ್ಭಂಭನಗೊಳಿಸಲಾಯಿತು.


ದುಗ್ಗಲಾಯ ದೈವಸ್ಥಾನದ ಅಧ್ಯಕ್ಷ ಸುಂದರ ರಾವ್ ಪೂಜಾ ಕಾರ್ಯ ನೆರವೇರಿಸಿದರು. ಅಯ್ಯಪ್ಪ ಭಜನಾ ಮಂದಿರದ ಭಜನಾ ಸಮಿತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.
ಮನೆಯವರು, ಬಂಧುಗಳು, ಊರವರು ಉಪಸ್ಥಿತರಿದ್ದರು.