ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘದ ಮಹಾಸಭೆ

0

ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ ಗುತ್ತಿಗಾರು ಇದರ ವಾರ್ಷಿಕ ಮಹಾಸಭೆ ಸೆ. 20 ರಂದು ಸಂಘದ ಕೇಂದ್ರ ಕಛೇರಿಯಲ್ಲಿ ನಡೆಯಿತು.

2022-23 ಸಾಲಿನಲ್ಲಿ ಸಂಘವು ₹ 1,91,69,72,704.84 ವ್ಯವಹಾರ ಮಾಡಿರುವುದಾಗಿ ಘೋಷಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ವಹಿಸಿದ್ದರು. ಉಪಾಧ್ಯಕ್ಷರಾದ ಸರೋಜಿನಿ ಮುಳುಗಾಡು, ನಿರ್ದೇಶಕರುಗಳಾದ ನಾಗೇಶ್ ಪಾರೆಪ್ಪಾಡಿ, ಮಹೇಶ್ ಮುತ್ಲಾಜೆ, ರಘುರಾಮ ಬಾಕಿಲ, ಹರೀಶ ಚಿಲ್ತಡ್ಕ, ಲೋಕೇಶ್ವರ ಡಿ ಆರ್, ಭರತ್ ನೆಕ್ರಾಜೆ, ದುರ್ಗಾದಾಸ್ ಮೆತ್ತಡ್ಕ, ಶಶಿಕಲಾ ದೇರಪಜ್ಜನಮನೆ, ಕರುಣಾಕರ ಎಚ್, ಹೊನ್ನಪ್ಪ ಗೌಡ ಚಿರೆಕಲ್, ಮಹಾಲಿಂಗ ನಾಯ್ಕ, ವಿಶ್ವನಾಥ ಆಚಳ್ಳಿ, ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮಿ ಕೆ ವೇದಿಕೆಯಲ್ಲಿದ್ದರು. ಪೂರ್ಣಚಂದ್ರ ಪೈಕ ಪ್ರಾರ್ಥಿಸಿದರು. ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ ಅವರು ವರದಿ ವಾಚಿಸಿದರು. ನಿರ್ದೇಶಕ ಭರತ್ ನೆಕ್ರಾಜೆ ಸ್ವಾಗತಿಸಿದರು. ಲೋಕೇಶ್ವರ ಡಿ.ಆರ್ ವಂದಿಸಿದರು. ಸಂಘದ ಸಿಬ್ಬಂದಿ ಶಿವಪ್ರಸಾದ್ ಹಾಲೆಮಜಲು ಕಾರ್ಯಕ್ರಮ ನಿರೂಪಿಸಿದರು