ಮಲೆನಾಡು ಟ್ರಸ್ಟ್ ವತಿಯಿಂದ ತವ್ಹೀದ್ ರಹ್ಮಾನ್ ದಂಪತಿಗಳಿಗೆ ಸನ್ಮಾನ

0

ಸುಳ್ಯದಿಂದ ಪ್ರಥಮ ಬಾರಿಗೆ ಜಮ್ಮು ಕಾಶ್ಮೀರದ ಲಡಾಖ್ ಗೆ ಮೋಟಾರು ಬೈಕಿನಲ್ಲಿ ತೆರಳಿದ ಸುಳ್ಯದ ಯುವ ಉದ್ಯಮಿ ತೌಹೀದ್ ರಹ್ಮಾನ್ ಮತ್ತು ಪತ್ನಿ ಜಸ್ಮಿಯ ಹಾಗೂ ೩ ವರ್ಷ ಪ್ರಾಯದ ಪುತ್ರ ಜಸೀಲ್ ರಹ್ಮಾನ್‌ರವರ ಸಾಧನೆ ಗುರುತಿಸಿ ಸುಳ್ಯದ ಮಲೆನಾಡು ಚಾರಿಟೇಬಲ್ ಟ್ರಸ್ಟ್ [ರಿ] ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ, ಕೆ.ಪಿ.ಸಿ.ಸಿ ಸಂಯೋಜಕರಾದ ಯಸ್.ಸಂಶುದ್ದೀನ್, ಮಲೆನಾಡು ಟ್ರಸ್ಟ್ ಇದರ ಗೌರವಾಧ್ಯಕ್ಷ , ಉದ್ಯಮಿ ರೋ|ಅಬ್ದುಲ್ ಹಮೀದ್ ಜನತಾ ನೆರವೇರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಲೆನಾಡು ಟ್ರಸ್ಟ್ ಇದರ ಅಧ್ಯಕ್ಷ, ನ.ಪಂ ಸದಸ್ಯ ರಿಯಾಝ್ ಕಟ್ಟೆಕ್ಕಾರ್ , ನ.ಪಂ ಸದಸ್ಯ ಶರೀಫ್ ಕಂಠಿ, ಉದ್ಯಮಿಗಳಾದ ಸಿದ್ದೀಕ್ ಕೊಕ್ಕೊ, ಮನ್ಸೂರ್ ಮೆಟ್ರೊ, ತೌಹೀದ್ ರಹ್ಮಾನ್ ,ಪೋಷಕರಾದ ಹವೀದ್ ಕುರುಂಜಿ ದಂಪತಿಗಳು ಉಪಸ್ಥಿತರಿದ್ದರು. ಹವ್ಯಾಸಿ ಪತ್ರಕರ್ತೆ ಶಾಹಿನ ಸುಳ್ಯ ಸ್ವಾಗತಿಸಿ, ಜಸ್ಮಿಯರವರನ್ನು ಸನ್ಮಾನಿಸಿದರು. ಕಾರ್ಯಕ್ರಮವನ್ನು ಕೆ.ಬಿ.ಇಬ್ರಾಹಿಂ ನಿರೂಪಿಸಿ, ವಂದಿಸಿದರು. ಫರ್ಝೀನಾ ಸುಳ್ಯ ಸಹಕರಿಸಿದರು.