ಆಲೆಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಪರಿಸರ ಸ್ವಚ್ಚತಾ ಶ್ರಮದಾನ

0

ಆಲೆಟ್ಟಿಸ.ಹಿ.ಪ್ರಾ.ಶಾಲೆಯ (ನಾರ್ಕೋಡು) ಪರಿಸರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಕೋಪ ನಿರ್ವಹಣಾ ಘಟಕದ ಸದಸ್ಯರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಸೇವಾ ಪ್ರತಿನಿಧಿ ಘಟಕದ ಅಧ್ಯಕ್ಷ ಸುರೇಶ್‌ ರವರ ನೇತೃತ್ವದಲ್ಲಿ ಶ್ರಮದಾನ ನಡೆಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಹುಕ್ರಪ್ಪ ಪೂಜಾರಿ , ಸೀತಾರಾಮ ಮೊರಂಗಲ್ಲು, ಸತೀಶ್‌ ಮೊರಂಗಲ್ಲು, ಹರೀಶ್ಚಂದ್ರ ಆಲೆಟ್ಟಿ, ಶ್ರೀಮತಿ ಸುಮತಿ ಮೊರಂಗಲ್ಲು, ಶ್ರೀಮತಿ ಪುಷ್ಪಾವತಿ ಆಲೆಟ್ಟಿ ಭಾಗವಹಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದ, ಸಹಶಿಕ್ಷಕಿ ಶ್ರೀಮತಿ ಸೀತಮ್ಮ, ಶಿಕ್ಷಕ ಸುನಿಲ್‌ ಉಪಸ್ಥಿತರಿದ್ದರು.