ಅಡ್ಕಾರು ಬೈಲಿನಲ್ಲಿ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ಗಾಣದ ಪುನರ್‌ಪ್ರತಿಷ್ಠೆ

0


ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ಇರುವ ಅಡ್ಕಾರು ಬೈಲು ಶ್ರೀಧರ ಪಾಟಾಳಿಯವರ ತರವಾಡು ಮನೆಯಲ್ಲಿ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಅಮ್ಮನವರ ಗಾಣದ ಪುನರ್‌ಪ್ರತಿಷ್ಠೆ ಇಂದು ಬೆಳಿಗ್ಗೆ (ಸೆ.೨೫ರಂದು) ನಡೆಯಿತು.

ಭಗವತಿ ಕ್ಷೇತ್ರದ ಅಚ್ಚಮಾರ್‌ನವರ ನೇತೃತ್ವದಲ್ಲಿ ಪುನರ್‌ಪ್ರತಿಷ್ಠಾ ಕಾರ್ಯಗಳು ನಡೆದವು. ಸೆ. 24 ರರಾತ್ರಿ ಕುಟ್ಟಿಪೂಜೆ ನಡೆದು, ಇಂದು ಬೆಳಿಗ್ಗೆ ಗಣಹೋಮ ನಡೆಯಿತು.

ಬಳಿಕ ಸತ್ಯನಾರಾಯಣ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸುಮಾರು 5೦೦ ವರ್ಷದ ಇತಿಹಾಸವಿರುವ ಈ ತರವಾಡು ಮನೆಗೆ ಕಳೆದ ೨ ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯ ನಡೆದು ಇಂದು ಪ್ರತಿಷ್ಠ ನಡೆಯಿತು.
ಪಾಟಾಳಿ ಯಾನೆ ಗಾಣಿಗ ಸಮಾಜ ಬಾಂಧವರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಅಡ್ಕಾರುಬೈಲಿನ ಪ್ರಮುಖರು ಉಪಸ್ಥಿತರಿದ್ದರು.