ಶಾಸಕಿ ಭಾಗೀರಥಿ ಮುರುಳ್ಯ ಕೆ.ಪಿ.ಟಿ.ಸಿ.ಎಲ್ ಎಂ ಡಿ.ಯವರ ಭೇಟಿ

0


ಸುಳ್ಯ ತಾಲೂಕಿನ ಬಹು ಬೇಡಿಕೆಯ ೧೧೦ ಕೆವಿ ವಿದ್ಯುತ್ ಕಾಮಗಾರಿಯ ಕುರಿತು ಶುಕ್ರವಾರ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಕೆ.ಪಿ.ಟಿ.ಸಿ.ಎಲ್ ನ ಎಂ ಡಿ ಅವರನ್ನು ಬೆಂಗಳೂರು ಕಛೇರಿಯಲ್ಲಿ ಭೇಟಿ ಮಾಡಿದರು. ಸುಳ್ಯದ ವಿದ್ಯುತ್ ಸಮಸ್ಯೆಗೆ ಆದಷ್ಟು ಬೇಗ ಕೆಲಸ ಪ್ರಾರಂಭಿಸಬೇಕು ಎಂದು ಹೇಳಿದರು. ಇದಕ್ಕೆ ಎಂ ಡಿ ಅವರು ಮುಂದಿನ ೧೫ ದಿನಗಳಲ್ಲಿ ಕೆಲಸ ಆರಂಭಿಸುವುದಾಗಿ ತಿಳಿಸಿದರು. ಶೀಘ್ರದಲ್ಲಿ ಕಾಮಗಾರಿ ಮುಗಿಸಿಕೊಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಮಹೇಶ್ ರೈ ಮೇನಾಲ ಹಾಗೂ ಪ್ರಮುಖರು ಉಪಸ್ಥಿತರಿದ್ದರು.