ಹಾಲೆಮಜಲು : ಸ್ವಚ್ಛತಾ ಕಾರ್ಯಕ್ರಮ

0

ನಾಲ್ಕೂರು ಗ್ರಾಮದ ಆದರ್ಶ ಯೂತ್ ಕ್ಲಬ್ ಹಾಲೆಮಜಲು ಶೌರ್ಯ ವಿಪತ್ತು ತಂಡ ನಾಲ್ಕೂರು ಹಾಗೂ ಊರಿನವರ ಸಹಕಾರದೊಂದಿಗೆ ಗಾಂಧಿ ಜಯಂತಿ ಪ್ರಯುಕ್ತ ಕಂದ್ರಪ್ಪಾಡಿ ರಸ್ತೆಯ ತಿರುವಿನಿಂದ ಹಾಲೆಮಜಲು ಶಾಲ ಬಳಿಯವರೆಗೆ ಹೆದ್ದಾರಿಯ ಇಕ್ಕೆಲಗಳಲ್ಲಿದ್ದ ಗಿಡಗಂಟಿಗಳನ್ನು ಕಡಿದು ಚರಂಡಿಯಲ್ಲಿ ಬಿದ್ದಿದ್ದ ಬಾಟ್ಲಿ ಸೇರಿದಂತೆ ಇನ್ನಿತರ ತ್ಯಾಜ್ಯಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಲಾಯಿತು.

ಗುತಿಗಾರು ಗ್ರಾಮ ಪಂಚಾಯಿತಿಯ ಸಿಬ್ಬಂದಿಯವರು ಕಸದ ವಾಹನವನ್ನು ಒದಗಿಸಿದ್ದರು.

ಈ ಸಂದರ್ಭದಲ್ಲಿ ಕ್ಲಬ್ಬಿನ ಗೌರವಾಧ್ಯಕ್ಷರಾದ ದಿನೇಶ ಹಾಲೆಮಜಲು , ಅಧ್ಯಕ್ಷ ಸತೀಶ ಬಂಬುಳಿ, ಕಾರ್ಯದರ್ಶಿ ದೀಪಕ್ ಕುಂಬಡ್ಕ, ಶೌರ್ಯ ವಿಪತ್ತು ತಂಡದ ಸದಸ್ಯರಾದ ಲೋಹಿತ್ ಚೆಮ್ಮನೂರು, ಪ್ರಜ್ವಲ್ ಕುಂಬಡ್ಕ, ಸೇವಾ ಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಸೇರಿದಂತೆ ಅನೇಕ ಮಂದಿ ಶ್ರಮಾದಾನದಲ್ಲಿ ಭಾಗವಹಿಸಿದರು.ವರದಿ.ಡಿ.ಹೆಚ್.