ನಾಲ್ಕೂರು : ಹೊಂಬೆಳಕು ತಂಡದಿಂದ ಸ್ವಚ್ಛತೆ

0

ನಾಲ್ಕೂರು ಗ್ರಾಮದಲ್ಲಿರುವ ಹೊಂಬೆಳಕು ಬಳಗದ ಸದಸ್ಯರಿಂದ ಪ್ರತಿ ತಿಂಗಳಿನಂತೆ ಈ ಬಾರಿ ಕೂಡ ಗಾಂಧಿ ಜಯಂತಿ ಪ್ರಯುಕ್ತ ವಿಶೇಷವಾಗಿ ಕಂದ್ರಪ್ಪಾಡಿ ರಸ್ತೆಯ ತಿರುವಿನಲ್ಲಿರುವ ಹಾಗೂ ಗುಂಡಡ್ಕ ಕಾಲೋನಿ ತಿರುವಿನಲ್ಲಿದ್ದ ಬಸ್ ತಂಗುದಾಣಗಳಲ್ಲಿ ಬಿದ್ದಿದ್ದ ಕಸಕಡ್ಡಿ ಹಾಗೂ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು.


ಸ್ವಚ್ಛತೆಯಲ್ಲಿ ಬಳಗದ ಗೌರವ ಅಧ್ಯಕ್ಷ ಡಿ.ಆರ್. ಉದಯಕುಮಾರ್ ದೇರಪ್ಪಜ್ಜನ ಮನೆ, ಅಧ್ಯಕ್ಷ ಚರಣ್ ದೇರಪ್ಪಜ್ಜನ ಮನೆ, ಕಾರ್ಯದರ್ಶಿ ಮದನ್ ಕೊಲ್ಯ, ಖಜಾಂಜಿ ವೇಣುಗೋಪಾಲ ಕೊಂದಾಳ ಸೇರಿದಂತೆ ಮತ್ತಿತರ ಸದಸ್ಯರು ಸ್ವಚ್ಛತೆಯಲ್ಲಿ ಪಾಲ್ಗೊಂಡರು.
ವರದಿ.ಡಿ.ಹೆಚ್