ಸುಳ್ಯ ಜೆಡಿಎಸ್ ಕಚೇರಿಯಲ್ಲಿ ಗಾಂಧೀ ಜಯಂತಿ

0

ಸುಳ್ಯ ತಾಲೂಕು ಜನತಾದಳ ವತಿಯಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ಪಕ್ಷದ ಕಛೇರಿಯಲ್ಲಿ ಆಚರಿಸಾಯಿತು.
ಪಕ್ಷದ ಮುಖಂಡ ಡಾ. ತಿಲಕ್ ರವರು ಗಾಂಧೀಜಿಯವರ ಜೀವನ ಸಾಧನೆ ಮತ್ತು ಅವರ ರಾಮರಾಜ್ಯದ ಕನಸಿನ ಬಗ್ಗೆ ಮಾತನಾಡಿದರು.
ಸಭೆಯಲ್ಲಿ ತಾಲೂಕು ಅಧ್ಯಕ್ಷರಾದ ಸುಕುಮಾರ್ ಕೊಡ್ತುಗುಳಿ, ಉಪಾಧ್ಯಕ್ಷ ದೇವರಾಮ ಬಾಳೆಕಜೆ, ಎಂ. ಬಿ. ಚೋಮ, ರಾಮಚಂದ್ರ ಬಳ್ಳಡ್ಕ, ನಿಹಾಲ್. ಕೆ ಮತ್ತಿತರರು ಹಾಜರಿದ್ದರು.
ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನರವರು ಸ್ವಾಗತಸಿ, ವಂದಿಸಿದರು.