ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಚಂದ್ರಶೇಖರ ಉದ್ದಂತಡ್ಕ ಪುನರಾಯ್ಕೆ

ಅ.01 ರಂದು ಕೇರ್ಪಳ ದುರ್ಗಾಪರಮೆಶ್ವರಿ ಕಲಾಮಂದಿರದಲ್ಲಿ ನಡೆದ ಸುಳ್ಯ ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2023 -24ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಚಂದ್ರಶೇಖರ ಉದ್ದಂತಡ್ಕ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರವೀಣ್ ಜಯನಗರ, ಕಾರ್ಯದರ್ಶಿಯಾಗಿ ಸುರೇಶ್ ಕರ್ಲಪ್ಪಾಡಿ, ಕೋಶಾಧಿಕಾರಿಯಾಗಿ ವಿಜಯ ಕುಮಾರ್ ಎರ್ಮೇಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸೌಮ್ಯಾರಮೇಶ್ ಇರಂತಮಜಲು ಆಯ್ಕೆಯಾದರು.


ನಿರ್ದೇಶಕರುಗಳಾಗಿ ಸುಬ್ಬ ಪಾಟಾಳಿ ಕಾಂತಮಂಗಲ, ಅನುಪಮಾ ಮಹಾಬಲಡ್ಕ, ಸಂಜಯ್ ನೆಟ್ಟಾರು, ಗೋಪಾಲಕೃಷ್ಣ ಮೊರಂಗಲ್ಲು, ವಿಜಯಕುಮಾರ್ ಉಬರಡ್ಕ, ರಾಧಾಕೃಷ್ಣ ಬೇರ್ಪಡ್ಕ, ಸೀತಾರಾಮ ಕರ್ಲಪ್ಪಾಡಿ, ಉದಯರವಿ ಕಲ್ಚಾರು, ದಾಮೋದರ ಅಡ್ಕಾರು, ಹಾಗೂ ಅಂಬಿಕಾ ಜಾಲ್ಸೂರು ಆಯ್ಕೆಯಾದರು.
ಸಂಘದ ಕಾನೂನು ಸಲಹೆಗಾರರಾಗಿ ನಾರಾಯಣ ಕೆ. ಮತ್ತು ಆಂತರಿಕ ಲೆಕ್ಕ ಪರಿಶೋಧಕರಾಗಿ ಮಹಾಲಿಂಗನ್ ಬಾಜರ್ತೊಟ್ಟಿಯವರನ್ನು ನೇಮಿಸಲಾಯಿತು.
ಹಾಗೂ ಗೌರವ ಸಲಹೆಗಾರರಾಗಿ ಶಂಕರ ಮಾಸ್ತರ್ ಪರಿವಾರಕಾನ, ಚಂದ ಕುಡೆಕಲ್ಲು ಹಾಗೂ ವೆಂಕಟ್ರಮಣ ಬೇರ್ಪಡ್ಕ ಅವರನ್ನು ನೇಮಿಸಲಾಯಿತು.