ಸುಳ್ಯ ತಾಲೂಕಿನಲ್ಲಿ ಪಿ.ಡಿ.ಒ. ಗಳ ವರ್ಗಾವಣೆ

0

ಸುಳ್ಯ ತಾಲೂಕಿನ ಪಂಚಾಯತ್ ಗಳ‌ ಪಿಡಿಒ ಗಳನ್ನು ತಾತ್ಕಾಲಿಕ ನೆಲೆಯಲ್ಲಿ ವರ್ಗಾವಣೆ ಗೊಳಿಸಲಾಗಿದೆ.

ಕೊಲ್ಲಮೊಗ್ರ ಗ್ರಾ.ಪಂ. ನ ಪಿಡಿಒ ರವಿಚಂದ್ರ ರಿಗೆ ಉಬರಡ್ಕ‌ಗ್ರಾ.ಪಂ. ವರ್ಗಾವಣೆಯಾಗಿದೆ.‌ಇದರ ಜತೆಗೆ ಅವರಿಗೆ ಮಡಪ್ಪಾಡಿ ಗ್ರಾ.ಪಂ. ಪಿಡಿಒ‌ ಹೆಚ್ಚುವರಿ ಜವಾಬ್ದಾರಿ ‌ನೀಡಲಾಗಿದೆ.

ಉಬರಡ್ಕದಲ್ಲಿ ಪಿಡಿಒ ಆಗಿದ್ದ ವಿದ್ಯಾಧರ ‌ಕುಡೆಕಲ್ಲುರಿಗೆ ಕೊಲ್ಲಮೊಗ್ರ ಪಿಡಿಒ ಆಗಿ ನಿಯೋಜನೆ ಮಾಡಲಾಗಿದೆ.

ಕಲ್ಮಡ್ಕದ ಪಿಡಿಒ ಪ್ರವೀಣ್ ರಿಗೆ ಕೊಡಿಯಾಲ ಗ್ರಾ.ಪಂ. ಪಿಡಿಒ ಆಗಿ ವರ್ಗಾವಣೆಯಾಗಿದ್ದು, ಅವರಿಗೆ ಬೆಳ್ಳಾರೆ ಗ್ರಾ.ಪಂ. ಪಿಡಿಒ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.

ಐವರ್ನಾಡು ಪಿಡಿಒ ಶ್ಯಾಮ್ ಪ್ರಸಾದರಿಗೆ ಹರಿಹರಪಲ್ಲತಡ್ಕ ಗ್ರಾ.ಪಂ. ಪಿಡಿಒ ಆಗಿ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.

ಕೊಡಿಯಾಲ ಪಿಡಿಒ ಜಯಂತ್ ರನ್ನು ಪಂಜ ಪಿಡಿಒ ಆಗಿ‌ ನಿಯೋಜಿಸಲಾಗಿದ್ದು, ಅವರಿಗೆ ಮರ್ಕಂಜ ಗ್ರಾ.ಪಂ‌ ಹೆಚ್ಚುವರಿ ಪ್ರಭಾರ ವಹಿಸಲಾಗಿದೆ.

ಕಲ್ಮಡ್ಕ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗೋಪಾಲಕೃಷ್ಣ ರನ್ನು ಪಂಜ ಗ್ರಾ.ಪಂ. ಕಾರ್ಯದರ್ಶಿ ಯಾಗಿ ನಿಯೋಜಿಸಲಾಗಿದೆ.

ಕಳಂಜ ಗ್ರಾಮ ಪಂಚಾಯತ್ ಪಿಡಿಒ ಗೀತಾರನ್ನು ಸುಳ್ಯ ತಾಲೂಕು ಪಂಚಾಯತ್ ಗೆ ಪಂಚಾಯತ್ ರಾಜ್ ಸಹಾಯಕ ನಿರ್ದೇಶಕರಾಗಿ ನಿಯೋಜಿಸಲಾಗಿದೆ.

ಕೊಡಿಯಾಲ ಪಿಡಿಒ ಆಗಿದ್ದ ಚಂದ್ರಾವತಿ ಯವರನ್ನು ಪಂಜ ಗ್ರಾಮ ಪಂಚಾಯತ್ ಪಿಡಿಒ ಆಗಿ ನಿಯೋಜಿಸಲಾಗಿತ್ತು. ಇದೀಗ ಪಂಜಕ್ಕೆ ಜಯಂತ್ ರವರು‌ ಬಂದಿರುವುದರಿಂದ ಚಂದ್ರಾವತಿ ಯವರು ಜಿಲ್ಲಾ ಪಂಚಾಯತ್ ನಲ್ಲಿ ವರದಿ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.