ಬಂಟರ ಸಂಘದ ವತಿಯಿಂದ ಅಗ್ನಿಪಥ್ ಗೆ ಆಯ್ಕೆಯಾದ ಸೃಜನ್ ರೈಗೆ ಸನ್ಮಾನ

0

ಅಗ್ನಿಪಥ್ ಗೆ ಆಯ್ಕೆಯಾಗಿರುವ ಮುರುಳ್ಯ ಗ್ರಾಮದ ಸೃಜನ್ ರೈ ಅವರನ್ನು ಸುಳ್ಯ ಬಂಟರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಸುಳ್ಯ ಬಂಟರ ಸಂಘದ ಮಾಸಿಕ ಸಭೆಯಲ್ಲಿ ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ್ ರೈ ಅವರು ಸೃಜನ್ ರೈ ಅವರನ್ನು ಸನ್ಮಾನಿಸಿರು.

ಈ ಸಂದರ್ಭದಲ್ಲಿ ಬಂಟರ ಸಂಘದ ಕಾರ್ಯದರ್ಶಿ ಸುಭಾಶ್ಚಂದ್ರ ರೈ, ಕೋಶಾಧಿಕಾರಿ ಗಂಗಾಧರ ರೈ, ಸೃಜನ್ ಅವರ ತಂದೆ ರಾಮಕೃಷ್ಣ ರೈ, ಬಂಟರ ಸಂಘದ ಅರಂತೋಡು ವಲಯಾಧ್ಯಕ್ಷ ಜೆ.ಕೆ. ರೈ, ಬಾಳಿಲ ವಲಯಾಧ್ಯಕ್ಷ ಕರುಣಾಕರ ರೈ, ಬೆಳ್ಳಾರೆ ವಲಯಾಧ್ಯಕ್ಷ ಕರುಣಾಕರ ಆಳ್ವ, ದಯಾಕರ ರೈ, ಮಹಿಳಾ ಅಧ್ಯಕ್ಷೆ ಶ್ರೀಮತಿ ಇಂದಿರಾ ರೈ, ಶ್ರೀಮತಿ ಕಮಲಾಕ್ಷಿ ರೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಜಯಪ್ರಕಾಶ್ ರೈ ಸ್ವಾಗತಿಸಿ, ಕಾರ್ಯದರ್ಶಿ ಸುಭಾಶ್ಚಂದ್ರ ರೈ ವಂದಿಸಿದರು. ಚಂದ್ರಾಕ್ಷಿ ರೈ ಕಾರ್ಯಕ್ರಮ ನಿರೂಪಿಸಿದರು.