ಐವರ್ನಾಡಿನಲ್ಲಿ ಸೌಜನ್ಯ ನ್ಯಾಯಕ್ಕಾಗಿ ಬೃಹತ್ ಪ್ರತಿಭಟನಾ ಸಭೆ ಪ್ರಾರಂಭ

0

ಪಾಲೆಪ್ಪಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಪ್ರಾರ್ಥನೆ

ಸೌಜನ್ಯ ಪರ ಹೋರಾಟ ಸಮಿತಿ ಐವರ್ನಾಡು ಇದರ ನೇತೃತ್ವದಲ್ಲಿ ಸೌಜನ್ಯಳ ನ್ಯಾಯಕ್ಕಾಗಿ ಮಹೇಶ್ ಶೆಟ್ಟಿ ತಿಮರೋಡಿಯವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಸಭೆಯು ಅ.08 ರಂದು ಐವರ್ನಾಡಿನಲ್ಲಿ ಪ್ರಾರಂಭಗೊಂಡಿತು.

ಪ್ರಾರಂಭದಲ್ಲಿ ಪಾಲೆಪ್ಪಾಡಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಸೌಜನ್ಯಳಿಗೆ ನ್ಯಾಯಕೋರಿ ಪ್ರಾರ್ಥಿಸಲಾಯಿತು.
ಬಳಿಕ ದಿ.ಎನ್.ಎಂ.ಬಾಲಕೃಷ್ಣ ಗೌಡರ ಪುತ್ಥಳಿಗೆ ಮಹೇಶ್ ಶೆಟ್ಡಿ ತಿಮರೋಡಿಯವರು ಮಾಲಾರ್ಪಣೆ ಮಾಡಿದರು.


ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸೌಜನ್ಯಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡಿದರು.


ವೇದಿಕೆಯಲ್ಲಿ ತುಳು ಜಾನಪದ ವಾಗ್ಮಿ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ, ಶ್ರೀಮತಿ ಜ್ಯೋತ್ದ್ನಾ ಪಾಲೆಪ್ಪಾಡಿ, ಸೌಜನ್ಯ ಹೋರಾಟ ಸಮಿತಿ ಅಧ್ಯಕ್ಷ ನಂದಕುಮಾರ್ ಬಾರೆತ್ತಡ್ಕ ಉಪಸ್ಥಿತರಿದ್ದಾರೆ.


ಸುಮಾ ಕೆ.ಎಸ್.ಪ್ರಾರ್ಥಿಸಿದರು.ರಾಜೇಶ್ ನೆಕ್ರೆಪ್ಪಾಡಿ ಸ್ವಾಗತಿಸಿದರು.
ಪ್ರತಿಭಟನೆಯಲ್ಲಿ ಸಾವಿರಾರು ಜನರು ಉಪಸ್ಥಿತರಿದ್ದಾರೆ.