ಮೈಸೂರಿನ ದಸರದ ಪ್ರಯುಕ್ತ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಕೆ.ಎಸ್. ಎಸ್. ಕಾಲೇಜಿನ ತಂಡದಿಂದ ಯಕ್ಷಗಾನ ನೃತ್ಯ ವೈಭವ

0

ನಾಡಹಬ್ಬ ದಸರಾದ ಪ್ರಯುಕ್ತ ಮೈಸೂರಿನ ಬಯಲು ರಂಗ ಮಂದಿರದಲ್ಲಿ ನಡೆಯುವ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ದ ಕೆಎಸ್ಎಸ್ ಕಾಲೇಜಿನ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಅ.7 ಯಕ್ಷಗಾನ ವೈಭವವನ್ನ ಪ್ರದರ್ಶನ ಮಾಡಿದರು. 24 ವಿದ್ಯಾರ್ಥಿಗಳನ್ನು ಒಳಗೊಂಡಂತ ಈ ತಂಡ ಈ ವರ್ಷ ವಿಶೇಷವಾಗಿ ಯಕ್ಷಗಾನ ನೃತ್ಯವನ್ನು ಪ್ರಸ್ತುತಪಡಿಸಿದರು. ನೃತ್ಯ ವಿಶೇಷವಾಗಿ ಮೈಸೂರಿನ ವೀಕ್ಷಕರನ್ನ ಮನಸೂರೆ ಗೊಳಿಸಿತು.ಈ ನೃತ್ಯವನ್ನು ವೀಕ್ಷಿಸಿದ ಮೈಸೂರಿನ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಅದೇ ರೀತಿ ಯುವ ಸಂಭ್ರಮದ ವಿಶೇಷ ಅಧಿಕಾರಿಯಾಗಿರುವಂತ ಶ್ರೀಮತಿ ದೀಪ ಇವರು ವೇದಿಕೆಯಲ್ಲಿ ಹರ್ಷವನ್ನ ವ್ಯಕ್ತಪಡಿಸಿ ತಂಡದ ಪ್ರದರ್ಶನವನ್ನ ಪ್ರಶಂಸಿದರು.

ಈ ತಂಡದ ನೇತೃತ್ವವನ್ನು ಸಾಂಸ್ಕೃತಿಕ ತಂಡದ ಸಂಯೋಜಕರಾದ ವಿನ್ಯಾಸ್ ಹೊಸೊಳಿಕೆ ಮತ್ತು ಹಿಂದಿ ವಿಭಾಗದ ಉಪನ್ಯಾಸಕಿ ಭಕ್ತಿಶ್ರೀ ಇ ವರು ವಹಿಸಿದ್ದರು. ಇದರ ನೃತ್ಯ ಸಂಯೋಜನೆಯನ್ನು ಪ್ರಮೋದ್ ಬೆಳ್ಳಾರೆ ಮತ್ತು ಅಶೋಕ್ ಬೆಳ್ಳಾರೆ ಇವರು ಮಾಡಿದ್ದರು.