ಡಾ. ಚಂದ್ರಶೇಖರ ದಾಮ್ಲೆ ಯವರಿಗೆ ಬೆಂಗಳೂರು ರೋಟರಿಯಿಂದ “ನೇಶನ್ ಬಿಲ್ಡರ್ಸ್” ಅವಾರ್ಡ್

0

ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯ “ಭಾರತ್ ಸಾಕ್ಷರತಾ ಮಿಷನ್” ವತಿಯಿಂದ 8-10-2023 ರಂದು ಬೆಂಗಳೂರಲ್ಲಿ
“Nation Builders” ಎಂಬ ಪ್ರಶಸ್ತಿಯನ್ನು ಡಾ. ದಾಮ್ಲೆ ಯವರಿಗೆ ನೀಡಿ ಗೌರವಿಸಿದರು. ಯಾವುದೇ ಅರ್ಜಿ ಹಾಕದೆ ರೋಟರಿಯವರು ತಾವಾಗಿಯೇ ಸುಳ್ಯದ ಸ್ನೇಹ ಶಾಲೆಯ ಪರಿಸರ ಸಮೃದ್ಧ ಶಿಕ್ಷಣದ ಪ್ರಯೋಗವನ್ನು ಗುರುತಿಸಿ ಪ್ರಶಸ್ತಿ ನೀಡಿದ್ದಾಗಿದೆ. ಆಯ್ಕೆಯ ಪೂರ್ವದಲ್ಲಿ ಸ್ನೇಹ ಶಾಲೆಯ DISE Code ನ್ನು ಕೂಡಾ ವಿಚಾರಿಸಿ ಪರಿಶೀಲಿಸಿದ್ದಾರೆ.

ಬೆಂಗಳೂರಿನ ಚಾಮರಾಜ ನಗರದಲ್ಲಿರುವ ಶೃಂಗೇರಿ ಸಭಾಭಾವನದಲ್ಲಿ ನಡೆದ ಇಪ್ಪತ್ತು ರೋಟರಿ ಕ್ಲಬ್ ಗಳ ಬೃಹತ್ ಸಮಾವೇಶದಲ್ಲಿ ಮಾಜಿ ಎಂ. ಎಲ್. ಸಿ. ಶ್ರೀ ಪುಟ್ಟಣ್ಣ ರವರು ನೂರು ಶಿಕ್ಷಕ/ ಶಿಕ್ಷಕಿಯರಿಗೆ “ರಾಷ್ಟ್ರ ನಿರ್ಮಾತೃ” ಗಳೆಂಬ ಪ್ರಶಸ್ತಿಗಳನ್ನು ವಿತರಿಸಿದರು. ಬೆಂಗಳೂರು ವಲಯದ ಹೊರಗಿನಿಂದ ಸ್ನೇಹ ಶಾಲೆಯನ್ನು ಮಾತ್ರ ಗುರುತಿಸಲಾಗಿತ್ತು.